ನನಮ್ಮೆಲ್ಲರ ಜಾತಿ ಒಂದೇ, ಮನುಷ್ಯ ಜಾತಿ ಎನ್ನುತ್ತಾ ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್

suddionenews
1 Min Read

ಬೆಂಗಳೂರು: ಇಂದು ತುಮಕೂರಿನಲ್ಲಿ ಮಡಿವಾಳರ ಬೃಹತ್ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಶಾಸಕ ಜಮೀರ್ ಅಹ್ಮದ್ ಗೈರಾಗಿದ್ದರು. ಈ ವಿಚಾರ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ ಜಮೀರ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಮನುಷ್ಯತ್ವದ ಬಗ್ಗೆ ಮಾತನಾಡಿದ್ದಾರೆ.

ಪಾದರಾಯನಪುರದ ಶಾಲೆಯೊಂದರಲ್ಲಿ ಇಂದು ಅಂಬೇಡ್ಕರ್ ಜಯಂತಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿಯಾಗಿದ್ದರು. ಪೌರಕಾರ್ಮಿಕರಿಗೆ ಗೌರವ ಕೂಡ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜಮೀರ್, ಜಾತಿ ಧರ್ಮಗಳನ್ನು ಮೀರಿದ್ದು, ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ ಅದುವೆ ಮನುಷ್ಯ ಜಾತಿ. ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದ್ದೇವೆ ಎಂದರೆ ಮನುಷ್ಯರಾಗಿಯೇ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಜಾತಿಗೆ ಧರ್ಮ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ದಲಿತ ಸ್ವಾಮೀಜಿಗೆ ಉಪಹಾರ ತಿನ್ನಿಸಿ, ಅದನ್ನೇ ಜಮೀರ್ ಕೂಡ ತಿಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *