ಇದಕ್ಕೆಲ್ಲಾ ಬೇಜಾರಾಗುವ ವ್ಯಕ್ತಿ ಸಿದ್ದರಾಮಯ್ಯ ಅಲ್ಲ : ಶಾಸಕ ಜಮೀರ್ ಅಹ್ಮದ್

suddionenews
1 Min Read

ಬೆಂಗಳೂರು: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರ ಸಭೆ ನಿನ್ನೆ ನಡೆದಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ಜಮೀರ್ ಅಹ್ಮದ್ ಬೆಂಬಲಿಗರು ಅಡ್ಡಿಪಡಿಸಿದರು ಎನ್ನಲಾಗಿದೆ. ಈ ಬಗ್ಗೆ ಜಮೀರ್ ಅಹ್ಮದ್ ಮಾತನಾಡಿದ್ದು, ಆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಭಾಷಣಕ್ಕೆ ನಿನ್ನೆ ಅಡ್ಡಿಪಡಿಸಿಲ್ಲ. ಬದಲಿಗೆ ಜೋರಾಗಿ ಜೈಕಾರ ಹಾಕಿದ್ದಾರೆ ಅಷ್ಟೆ. ಅಷ್ಟಕ್ಕೆಲ್ಲಾ ಬೇಜಾರಾಗುವ ವ್ಯಕ್ತಿ ಸಿದ್ದರಾಮಯ್ಯ ಅವರಲ್ಲ. ಇದನ್ನೆಲ್ಲಾ ಕಂಡರೆ ಸಿದ್ದರಾಮಯ್ಯ ಅವರಿಗೂ ಖುಷಿಯಾಗುತ್ತೆ. ಈ ಸಂಬಂಧ ನಿನ್ನೆ ನಾನೇ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.

ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರ ಆಯ್ಕೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಅಬ್ದುಲ್ ಜಬ್ಬಾರ್ ಹೆಸರನ್ನ ನಾನೇ ಹೇಳಿದ್ದೆ. ಆದ್ರೆ ಅಷ್ಟರಲ್ಲಿ ಹೈಕಮಾಂಡ್ ಕೂಡ ಜಬ್ಬಾರ್ ಹೆಸರನ್ನೇ ಸೂಚಿಸಿದೆ. ದೆಹಲಿಗೆ ಭೇಟಿ ನೀಡಿದ್ದ ಕಾರಣ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದೇನೆ. ಆಗ ಹುಬ್ಬಳ್ಳಿ ಧಾರವಾಡದಲ್ಲಿ ಅಲ್ಪಸಂಖ್ಯಾತರಿಗೆ ಟಿಕರಟ್ ಕೇಳಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *