ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಉಗುರನ್ನು ಕತ್ತರಿಸಬಾರದೆಂದು ಮನೆಯಲ್ಲಿನ ಹಿರಿಯವರು ಹೇಳುತ್ತಾರೆ. ಇನ್ನೂ ಇದರ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ.
ಹಳೆಯ ಕಾಲದಲ್ಲಿ ಈಗಿನಂತೆ ವಿದ್ಯುತ್ ದೀಪಗಳ ಸೌಲಭ್ಯ ಇರಲಿಲ್ಲ ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಉಗುರು ಕತ್ತರಿಸುವಾಗ ಬೆಳಕು ಸರಿಯಾಗಿ ಇಲ್ಲದಿದ್ದಾಗ ಚರ್ಮ ಕತ್ತರಿಸಿ ಗಾಯವಾಗುವ ಸಾಧ್ಯತೆಯಿದೆ. ಕತ್ತರಿಸಿದ ಉಗುರುಗಳು ಎಲ್ಲಿ ಬಿದ್ದಿವೆ ಎಂದು ತಿಳಿಯುತ್ತಿರಲಿಲ್ಲ. ಅವು ಆಹಾರದಲ್ಲಿ ಅಥವಾ ಬಟ್ಟೆಯಲ್ಲಿ ಸಿಲುಕಿಕೊಂಡು ಸೋಂಕು ಉಂಟುಮಾಡುವ ಸಾಧ್ಯತೆ ಇರುತ್ತಿತ್ತು. ಹಾಗಾಗಿ ಸಂಜೆಯ ಮೇಲೆ ಉಗುರನ್ನು ಕಟ್ ಮಾಡಬಾರದೆಂದು ಹೇಳಲಾಗುತ್ತದೆ.
ಸಂಜೆ ಹೊತ್ತು ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವ ಸಮಯ ಎಂದು ನಂಬಲಾಗುತ್ತದೆ. ಈ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಉಗುರು ಕತ್ತರಿಸುವುದು ಅಶುದ್ಧ ಕೆಲಸವೆಂದು ಧಾರ್ಮಿಕ ನಂಬಿಕೆಯ ಪ್ರಕಾರ ಪರಿಗಣಿಸಲಾಗುತ್ತಿತ್ತು.



