ದೆಹಲಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇರ ಟಾರ್ಗೆಟ್ ಬಿ.ಎಸ್.ಯಡಿಯೂರಪ್ಪ ಅಮನಡ್ ಸನ್ಸ್. ಅದರಲ್ಲೂ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದಾಗಿಂದಲೂ ಓಪನ್ ಆಗಿಯೇ ವಾಗ್ದಾಳಿ ನಡೆಸುತ್ತಿದ್ದರು. ಇದು ಬಿಜೆಪಿ ಪಕ್ಷಕ್ಕೂ ಮುಜುಗರವನ್ನುಂಟು ಮಾಡಿತ್ತು. ಹೀಗಾಗಿ ಬಿನೆಪಿಯ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ನೋಟೀಸ್ ಜಾರಿ ಮಾಡಿತ್ತು. ಅದಕ್ಕೆ ಯತ್ನಾಳ್ ಅವರು ಉತ್ತರ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.
ಕೇಂದ್ರ ಶಿಸ್ತು ಸಮಿತಿಯ ನೋಟೀಸ್ ಗೆ ಯತ್ಬಾಳ್ ಅವರು 9 ಪುಟಗಳ ಉತ್ತರವನ್ನು ನೀಡಿದ್ದಾರೆ. ಇ-ಮೇಲ್ ಮೂಲಕ ಉತ್ತರ ನೀಡಿದ್ದು, ನೋಟೀಸ್ ನೀಡಿದ 72 ಗಂಟೆಯ ಒಳಗೆ ಉತ್ತರ ನೀಡಿ ನಿಯಮವನ್ನು ಪಾಲನೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ನೋಟೀಸ್ ಗೆ ಯತ್ನಾಳ್ ಕೊಟ್ಟ ಉತ್ತರವೇನು ಎಂಬುದು ಬಹಿರಂಗವಾಗಿಲ್ಲ. ಆದರೆ ಕೆಲವು ದಿನಗಳ ಹಿಂದಷ್ಟೇ ಯತ್ನಾಳ್ ಅವರುಶಿಸ್ತು ಸಮಿತಿಯ ನೋಟೀಸ್ ಗೆ ಉತ್ತರ ಕೊಡುವುದಕ್ಕೆ ಏನು ಇಲ್ಲ ಎಂದೇ ಹೇಳಿದ್ದರು. ಈಗ ಪುಟಗಟ್ಟಲೇ ಉತ್ತರ ನೀಡಿದ್ದಾರೆಂದು ತಿಳಿದು ಬಂದಿದೆ.
ಇನ್ನು ಈ ಉತ್ತರದಲ್ಲಿ ವಿಜಯೇಂದ್ರ ವಿರುದ್ಧ ಸರಣಿ ದೂರುಗಳನ್ನು ನೀಡಿದ್ದು, ಪಕ್ಷದ ಚೌಕಟ್ಟಿನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡಿರುವುದು, ಆ ಹೋರಾಟದಲ್ಲಿ ಸಕ್ಸಸ್ ಆಗಿದ್ದನ್ನು ಬರೆದಿದ್ದಾರೆ ಎನ್ನಲಾಗಿದೆ. ಇನ್ನೂ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ನೀಡಿದ ನೋಟೀಸ್ ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ನೋಟೀಸ್ ನೀಡಿತ್ತು. ಆದರೂ ಯತ್ನಾಳ್ ಅವರು ಯಡಿಯೂರಪ್ಪ ಅವರ ಫ್ಯಾಮಿಲಿ ಮೇಲೆ ವಾಗ್ದಾಳಿ ನಡೆಸೋದು ಮಾತ್ರ ನಿಂತಿರಲಿಲ್ಲ.






