Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಎಂ, ಡಿಸಿಎಂ ಹಾಗೂ ಸರ್ಕಾರದ ವಿರುದ್ಧ ಕೇರಳದಲ್ಲಿ ಯಾಗ : ಅಷ್ಟಕ್ಕೂ ಏನಿದು ಶತ್ರು ಭೈರವನ ಯಾಗ..?

Facebook
Twitter
Telegram
WhatsApp

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹೊಸ ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ನನ್ನ ವಿರುದ್ಧ ಸಿಎಂ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರು ಭೈರವಿಯಾಗ ನಡೆಯುತ್ತಿದೆ ಎಂದಿದ್ದಾರೆ. ಈ ವಿಚಾರ ಹೇಳಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ನನ್ನ ವಿರುದ್ಧ, ಸಿಎಂ ವಿರುದ್ಧ, ಸರ್ಕಾರದ ವಿರುದ್ಧವೇ ಯಾಗ ಮಾಡಿಸಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಯಾಗ ನಡೆಯುತ್ತಿದೆ. ಉತ್ತರ ಭಾರತದಿಂದ ಬಂದಿರುವ ಅಘೋರಿಗಳ ತಂಡವೊಂದು ಈ ಯಾಗವನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಯಾಗದಲ್ಲು ಪಂಚ ಬಲಿಯನ್ನು ನೀಡಲಾಗುತ್ತಿದೆ. ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ. ಯಾಗದಲ್ಲಿ ಯಾರೆಲ್ಕಾ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಗೊತ್ತಿದೆ. ಕೆಟ್ಟದು ಮಾಡಿದವರು ಮಾಡಲಿ, ನನಗೆ ನಮ್ಮ ದೇವರ ಮೇಲೆ ನಂಬಿಕೆ ಇದೆ. ದೇವರು ನಮ್ಮನ್ನು ಕಾಪಾಡುತ್ತವೆ ಎಂದಿದ್ದಾರೆ.

ಅಷ್ಟಕ್ಕು ಏನಿದು ಶತ್ರು ಭೈರವ ಯಾಗ..?

ಶತ್ರು ಯಾಗ ಎಂದರೆ ಹೆಸರೇ ಹೇಳುವಂತೆ ಶತ್ರುಗಳನ್ನು ನಾಶಪಡಿಸುವ ಅಥವಾ ಶತ್ರುಗಳ ಬಾಧೆಯಿಂದ ಹಿರಬರುವಂತ ಯಾಗ ಇದಾಗಿದೆ ಎಂದು ಧಾರ್ಮಿಕ ವಲಯದ ಹಲವರು ಹೇಳುತ್ತಾರೆ. ಕಾಲ ಭೈರವಿ ಎಂಬ ಹೆಸರು ಹೇಳಿದರೇನೆ ಹಲವರು ಬೆಚ್ಚಿಬೀಳುವುದು ಉಂಟು. ಇಂಥದ್ದೊಂದು ಯಾಗವನ್ನು ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದೇಗುಲದಲ್ಲಿ ಈ ಯಾಗ ನಡೆಯುತ್ತಿದ್ದು, 21 ಮೇಕೆ, 3 ಎಮ್ಮೆ, 21‌ ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ಅವರು ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉತ್ತರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಇಬ್ಬಾಗವಾಗಬೇಕು : ಚಂದ್ರಶೇಖರ ಸ್ವಾಮೀಜಿ..!

  ಬೆಂಗಳೂರು: ಕೆಂಪೇಗೌಡ ಜಯಂತಿಯಲ್ಲಿ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದ ಚಂದ್ರಶೇಖರ ಸ್ವಾಮೀಜಿ, ಇದೀಗ ಆ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ವಿಶ್ಚ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ

ಕೈಮುಗಿದು ಮನವಿ ಮಾಡುವೆ, ರಾಜಕಾರಣದ ಸುದ್ದಿಗೆ ಬರಬೇಡಿ : ಸ್ವಾಮೀಜಿಗಳಿಗೆ ಹೇಳಿದ ಡಿಕೆಶಿ

  ಬೆಂಗಳೂರು: ಕೆಂಪೇಗೌಡ ಜಯಂತಿಯಂದು ತುಂಬಿದ್ದ ವೇದಿಕೆಯಲ್ಲಿ ಚಂದ್ರಶೇಖರ ಸ್ವಾಮೀಜಿ ಅವರು ಸಿಎಂ ಬದಲಾವಣೆಯ ವಿಚಾರವನ್ನು ಮಾತನಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದರು. ಇನ್ಮುಂದೆ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು

ಡೆಂಗ್ಯೂ ಹೆಚ್ಚಾಗ್ತಾ ಇದೆ : ಅದರಿಂದ ತಪ್ಪಿಸಿಕೊಳ್ಳಲು ಈ ಆಹಾರ ಸೇವಿಸಿ

ಮಳೆಗಾಲ ಶುರುವಾಯ್ತು ಮದರೆ ಸೊಳ್ಳೆಗಳಿಂದ ಶುರುವಾಗುವ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಇತ್ತಿಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದಾವೆ. ಸೊಳ್ಳೆಗಳ ನಾಶಕ್ಕೆ ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಜನ ಕೂಡ ಬಹಳ ಎಚ್ಚರದಿಂದ

error: Content is protected !!