ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಆ. 25 : ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಕೆ. ರವೀಂದ್ರ ತಿಳಿಸಿದರು.
ನಗರದ ರೋಟರಿ ಭವನದ ಮುಂಭಾಗದಿಂದ ಸ್ಥಳಿಯ ರೋಟರಿ ಕ್ಲಬ್ ಸಂಸ್ಥೆ, ಇನ್ನರ್ ವ್ಹೀಲ್ ಕ್ಲಬ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಪೋಲಿಯೋ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಸಂಸ್ಥೆ ಫಲ್ಸ್ ಪೋಲಿಯೋ ಹಾಕಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಭಾರತದಲ್ಲಿ 2011 ರಿಂದ ಈಚೆಗೆ ಯಾವುದೆ ಮಗುವಿಗೆ ತೊಂದರೆಯಾಗಿಲ್ಲ ರೋಟರಿ ಸಂಸ್ಥೆ 30 ವರ್ಷದಿಂದ ಇಂತಹ ಮಾಹನ್ ಕಾರ್ಯದಲ್ಲಿ ತೊಡಗಿದೆ. ನೆರೆಯ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ನೈಜಿರಿಯಾ ದೇಶಗಳಮಕ್ಕಳಲ್ಲಿ ಇನ್ನು ಕಾಯಿಲೆ ಕಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಫಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಾಹಿತಿ ಕೊರತೆಯಿಂದ ಸೂಕ್ತ ಕಾಲದಲ್ಲಿ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸುವಲ್ಲಿ ತಪ್ಪಿಸಿದರೆ, ಅದರಿಂದ ಉಂಟಾಗುವ ಪರಿಣಾಮ ಜೀವನದುದ್ದಕ್ಕೂ ಮಗುವಿಗೆ ಕಾಡುವಂತಾಗುತ್ತದೆ. ಆದರಿಂದ ಸರ್ಕಾರ ಈ ಬಗ್ಗೆ ಕ್ರಮವಹಿಸಿದ್ದು ಇದರ ಸದುಪಯೋಗವಾಗಬೇಕು. ಪ್ರತಿ ವರ್ಷವೂ ರೋಟರಿ ಸಂಸ್ಥೆಯಿಂದ ಪೋಲಿಯೊ ಅರಿವು ಕಾರ್ಯಕ್ರಮವನ್ನು ವಿಭಿನ್ನವಾಗಿ ಮಾಡಲಾಗುತ್ತಿದೆ ಎಂದರು.
ಜಾಗೃತಿ ಜಾಥಾ: ಪೋಲಿಯೋ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಅಯೋಜಿಸಿದ್ದ ಪೋಲಿಯೋ ಜಾಗೃತಿ ಜಾಥಾ ಹಿನ್ನಲೆ ನಗರದ ರೋಟರಿ ಭವನದ ಮುಂಭಾಗದಿಂದ ಆರಂಭಿಸಿ ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ವಾಸವಿ ವೃತ್ತ, ಓನಕೆ ಒಬವ್ವ ವೃತ್ತದವರೆಗೂ ಜಾಥಾ ನಡೆಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಭಾಗ್ಯಮೂರ್ತಿ, ಕೆ.ಮಧು ಪ್ರಸಾದ್, ಜಿ.ಎ.ವಿಶ್ವನಾಥ್, ಸೂರ್ಯನಾರಾಯಣ, ಆರ್,ಉಪ ಸಭಾಪತಿಗಳಾದ ಆರುಣ್ಕುಮಾರ್, ಕಾರ್ಯದರ್ಶಿ ನಜರುಲ್ಲಾ ಖಂಜಾಚಿ ಎಸ್ ವೀರೇಶ್, ಗುರುಮೂರ್ತಿ, ಶಶಿಧರ್, ಲಕ್ಷ್ಮಣ್,ಶಂಕರಪ್ಪ ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


