ಅಂಬೇಡ್ಕರ್ ಆಶಯದಂತೆ ಹೆಣ್ಣು ಸರ್ವ ಸ್ವತಂತ್ರಳಾಗಬೇಕು : ಹೆಚ್.ಆನಂದ್‍ಕುಮಾರ್

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಮಹಿಳೆ ಸಣ್ಣ ಸಣ್ಣ ವ್ಯಾಪಾರಗಳನ್ನು ಮಾಡುವ ಮೂಲಕ ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕೆಂದು ಸಮಾಜ ಸೇವಕಿ ಕೆ.ಸಿ.ವೀಣ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.
ಹೆಣ್ಣು ಎಂದಾಕ್ಷಣ ಅಬಲೆ ಎನ್ನುವ ಹಣೆಪಟ್ಟಿ ಕಟ್ಟುವುದು ಸಹಜ. ಅದಕ್ಕಾಗಿ ಮಹಿಳೆ ಶಿಕ್ಷಣವಂತಳಾಗುವ ಮೂಲಕ ತನ್ನ ಮೇಲಾಗುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆಯನ್ನು ಮೆಟ್ಟಿ ನಿಂತಾಗ ಮಾತ್ರ ಸಮಾಜದಲ್ಲಿ ದಿಟ್ಟತನದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತ ದೊಡ್ಡ ಉದ್ಯಮಿಗಳಾಗುವ ಹಂತಕ್ಕೆ ಬೆಳೆಯಬೇಕೆಂದು ಹೇಳಿದರು.

ಸುಧಾ ಶ್ರೀನಿವಾಸ್‍ಮೂರ್ತಿ ಮಾತನಾಡುತ್ತ ಹೆಣ್ಣು ಕೇವಲ ಅಡುಗೆ ಮನಗೆ ಮಾತ್ರೆ ಸೀಮಿತವಾಗಬಾರದು. ಸರ್ಕಾರದಿಂದ ಅನೇಕ ಸೌಲಭ್ಯಗಳಿವೆ. ಎಲ್ಲವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣವಾಗಬೇಕು. ಹಕ್ಕನ್ನು ಯಾರಿಂದಲೂ ಕೇಳಿ ಪಡೆಯುವುದಲ್ಲ. ಪ್ರತಿಭಟನೆ, ಹೋರಾಟ, ಚಳುವಳಿ ಮೂಲಕ ತನಗೆ ಸಿಗಬೇಕಾದ ನ್ಯಾಯವನ್ನು ಗಿಟ್ಟಿಸಿಕೊಳ್ಳಬೇಕೆಂದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಪ್ರತಿ ಮನೆಯಲ್ಲಿಯೂ ಹೆಣ್ಣು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಅನುಭವಿಸಿಕೊಂಡು ಬರುತ್ತಿದ್ದಾಳೆ. ಶಿಕ್ಷಣದ ಮೂಲಕ ಜಾಗೃತಳಾಗಬೇಕು. ಐರೋಪ್ಯ ದೇಶದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ಅನಾಚಾರಗಳು ನಡೆಯುವುದು ತುಂಬಾ ಕಡಿಮೆ. ಏಕೆಂದರೆ ಅಲ್ಲಿ ವೈಚಾರಿಕತೆಯಿದೆ. ಪುರಾಣ ಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಿದೆ. ಅಂಬೇಡ್ಕರ್ ಆಶಯದಂತೆ ಹೆಣ್ಣು ಸರ್ವ ಸ್ವತಂತ್ರಳಾಗಬೇಕೆಂದು ಕರೆ ನೀಡಿದರು.

ಮುನಿರಾ ಎ.ಮಕಾಂದಾರ್, ಮೋಕ್ಷರುದ್ರಸ್ವಾಮಿ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಪ್ರಜಾ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಹರೀಶ್, ರತ್ನಮ್ಮ, ಶಶಿ, ನಾಗರಾಜ್ ಇವರುಗಳು ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *