ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅಲ್ಪಸಂಖ್ಯಾತರಿಗೆ ಕೊಡ್ತಾರಾ..? ಸತೀಶ್ ಜಾರಕಿಹೊಳಿ ಉತ್ತರವೇನು..?

1 Min Read

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ಈ ಬಾರಿ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ ಎಂಬ ಮಾತಿದೆ. ಇದಕ್ಕೆ ಹಲವರ ವಿರೋಧವಿದ್ರೆ ಇನ್ನು ಹಲವರ ಬೆಂಬಲವಿದೆ. ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೈಕಮಾಂಡ್ ತೀರ್ಮಾನ ಮಾಡುತ್ತೆ ಯಾರಿಗೆ ಕೊಡಬೇಕು ಅಂತ. ನಮ್ಮ ಹಿರಿಯರಿದ್ದಾರೆ, ನಮ್ಮ ಸಿಎಂ, ಡಿಸಿಎಂ, ಜನರಲ್ ಸೆಕ್ರೆಟರಿ ತೀರ್ಮಾನ ಮಾಡ್ತಾರೆ. ಟಿಕೆಟ್ ಕೊಡಬೇಕಲ್ಲ, ಕೊಟ್ಮೇಲಷ್ಟೇ ಅಹಿಂದ, ಹಿಂದುಳಿದವರಿಗಾ ಗೊತ್ತಾಗೋದು. ಬಾಗಲಕೋಟೆಯಲ್ಲಿ ಅಹಿಂದಾಗೆ ಕೊಡ್ತೀವಿ ಅಂತ. ಅಲ್ಲಿ ಏನು ಗೊಂದಲ ಇಲ್ಲ. ಟಿಕೆಟ್ ಸಿಕ್ಮೇಲೆ ಅದೆಲ್ಲಾ. ಅದರ ಬಗ್ಗೆ ಏನು ಹೇಳುವುದಕ್ಕೆ ಆಗಲ್ಲ. ಹೈಕಮಾಂಡ್ ನ ಅಂತಿಮ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದಿದ್ದಾರೆ.

ಇದೆ ವೇಳೆ ಒಳಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್ ನಲ್ಲಿ ಇತ್ಯರ್ಥ ಆಗದೆ ಏನು ಮಾಡುವುದಕ್ಕೆ ಆಗಲ್ಲ. ಆರು ತಿಂಗಳಿನಿಂದ ನಿಲ್ಲಿಸಿದ್ದೀವಿ. ಸುಮಾರು 42 ಸಾವಿರ ಹುದ್ದೆಗಳ ಭರ್ತಿ ಖಾಲಿ ಇದೆ. ವರ್ಷಕ್ಕೆ 5 -10 ಸಾವಿರ ಬಂದೇ ಬರುತ್ತೆ. ಕೆಲಸ ಮಾಡೋದಕ್ಕೆ ಜನ ಬೇಕು. ಈಗ ಯಾರಿದ್ದಾರೆ. ಯಥಾಸ್ಥಿತಿ ಬಂದಿದೆ ಈ ವರ್ಷ. ಕಾಂಗ್ರೆಸ್ ಕೆಲಸ ಮಾಡಿದೆಯಾ ಇಲ್ವಾ ಅನ್ನೋದನ್ನ ಜನ ತೀರ್ಮಾನ ಮಾಡಬೇಕು. ವಿರೋಧ ಪಕ್ಷದವರು ಹೇಳ್ತಾರೆ ಏನು ಮಾಡಿಲ್ಲ ಅಂತ‌. ಗ್ಯಾರಂಟಿಗಳಿಂದ ಹೊರೆ ಹಾಗಿಯೇ ಆಗುತ್ತೆ. ಎಲ್ಲವನ್ನು ಕೊಟ್ಟಿದೆ ಅಲ್ವಾ ಅಂತ ಹೇಳುವ ಮೂಲಕ ಡಿಕೆ ಶಿವಕುಮಾರ್ ಹೇಳಿದ ಮಾತನ್ನ ಒಪ್ಪಿಕೊಂಡಂತೆ ಆಗಿದೆ.

Share This Article
Enable Notifications OK No thanks