ಹಿಂದಿಯಲ್ಲಿ ಮಾತನಾಡಿ ಯಾಮಾರಿಸಲು ಹೋದ ಸ್ಯಾಂಟ್ರೋ ರವಿಯನ್ನು ಪೊಲೀಸರು ಸುಮ್ಮನೆ ಬಿಡುತ್ತಾರಾ..?

suddionenews
1 Min Read

ಮೈಸೂರು: ಅತ್ಯಾಚಾರ, ವಂಚನೆ, ಜಾತಿ ನಿಂದನೆ ಹೀಗೆ ಅನೇಕ ಪ್ರಕರಣದಲ್ಲಿ ಬೇಕಾಗಿದ್ದ ಸ್ಯಾಂಟ್ರೋ ರವಿ, ಹನ್ನೊಂದು ದಿನದಿಂದ ತಲೆ ಮರೆಸಿಕೊಂಡಿದ್ದ. ಅದು ಗುಜರಾತ್ ನಲ್ಲಿ ಹೋಗಿ ತನ್ನೆಲ್ಲಾ ಸಿಮ್ ಕಾರ್ಡ್ ಗಳನ್ನು ಬದಲಿಸಿಕೊಂಡು, ತಲೆಯ ವಿಗ್ ಅನ್ನು ತೆಗೆದು, ಸ್ಯಾಂಟ್ರೋ ರವಿ ಎಂಬ ಗುರುತೆ ಸಿಗದಂತೆ ಬದುಕುತ್ತಿದ್ದ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ತಂಡಗಳನ್ನು ಕಟ್ಟಿಕೊಂಡು. ಗುಜರಾತ್ ನಲ್ಲಿ ಅಡಗಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದಾರೆ.

ಆದರೆ ಸ್ಯಾಂಟ್ರೋ ರವಿಯ ಬಂಧನದ ಬಳಿಕ ಪೊಲೀಸರಿಗೆ ಶಾಕ್ ಆಗುವಂತ ಘಟನೆ ನಡೆದಿದೆ. ಆತನ ವೇಷ, ಭಾಷೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಆದರೆ ಪೊಲೀಸರು ತನ್ನದೇ ಭಾಷೆಯಲ್ಲಿ ಕ್ಲಾಸ್ ತೆಗೆದುಕೊಂಡಾಗ ಎಲ್ಲವೂ ಹೊರ ಬಂದಿದೆ.

ಸ್ಯಾಂಟ್ರೋ ರವಿ, ವಿಗ್ಗು, ಮೀಸೆಯನ್ನಷ್ಟೇ ತೆಗೆದಿರಲಿಲ್ಲ. ಬದಲಿಗೆ ಭಾಷೆಯನ್ನು ಬದಲಾಯಿಸಿದ್ದ. ಕನ್ನಡದಲ್ಲಿ ಮಾತನಾಡಿಸಲು ಹೋದರೆ ಕನ್ನಡ ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದ. ಸ್ಯಾಂಟ್ರೋ ರವಿಯನ್ನು ಪೊಲೀಸರು ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ಆಗ ನಂಗೆ ಕನ್ನಡ ಗೊತ್ತಿಲ್ಲ, ಹಿಂದಿಯಲ್ಲೇ ಮಾತನಾಡಿ ಅಂತ ಪೊಲೀಸರನ್ನೇ ಯಾಮಾರಿಸಲು ಹೋಗಿದ್ದಾನೆ. ಎಲ್ಲವನ್ನು ನೋಡುತ್ತಿದ್ದ ಪೊಲೀಸರು ಕೊನೆಗೆ ತಮ್ಮ ಭಾಷೆಯಲ್ಲಿ ಹೇಳಿದಾಗ, ನಾನೇ ಸ್ಯಾಂಟ್ರೋ ರವಿ ಅಂತ ಒಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *