ಈಶ್ವರಪ್ಪ ರಾಜೀನಾಮೆ ಯಾಕೆ ಕೊಡಬೇಕು : ಸಿಎಂ ಪ್ರಶ್ನೆ

suddionenews
1 Min Read

ಮಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಈ ಹಿಂದೆ ಒಬ್ಬ ಆಫೀಸರ್ ಸೂಸೈಡ್ ಮಾಡಿಕೊಂಡರು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರಾ..? ತನಿಖೆ ಮಾಡಿಸ್ತಾ ಇದ್ದೀವಿ. ಇವತ್ತಿನ ಘಟನೆ ಮತ್ತು ಆ ಹಿನ್ನೆಲೆಯ ಬಗ್ಗೆ ಸಂಪೂರ್ಣ ತನಿಖೆಯಾಗುತ್ತೆ. ತನಿಖೆಯ ನಂತರ ಸತ್ಯಾಂಶ ಹೊರಬರುತ್ತೆ. ಸತ್ಯಾಂಶದ ನಂತರ ಏನು ಹೊರ ಬರುತ್ತೆ ಅದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತೆ.

ಅವರ ಬಳಿ ಮಾತನಾಡಿರುವ ಬಗ್ಗೆಯೂ ತನಿಖೆಯಾಗುತ್ತೆ. ಪೊಲೀಸರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ. ಅತ್ಯಂತ ವ್ಯವಸ್ಥಿತ ತನಿಖೆಯಾಗಬೇಕು, ಸ್ಥಳ ಪರಿಶೀಲನೆ ಸೇರಿದಂತೆ ಕಾನೂನು ಬದ್ಧವಾಗಿಯೇ ತನಿಖೆ ನಡೆಯುತ್ತದೆ. ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ತನಿಖೆ ನಡೆಯುತ್ತದೆ.

ನನಗೆ ಇತ್ತಿಚೆಗೆ ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿದ್ದರು. ಆರೋಪವನ್ನು ಈಶ್ವರಪ್ಪ ಅವರು ಅಲ್ಲಗಳೆದಿದ್ದಾರೆ. ಈ ಸಂಬಂಧ ಕೋರ್ಟ್ ನಲ್ಲಿ ಕೇಸ್ ಕೂಡ ಹಾಕಿದ್ದರು. ಅವರಿಗೆ ನೋಟೀಸ್ ಕೂಡ ಹೋಗಿದೆ. ಈ ಎಲ್ಲವೂ ತನಿಖೆ ಸಂದರ್ಭದಲ್ಲಿ ಮುಖ್ಯವಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *