ಈಶ್ವರಪ್ಪನನ್ನು ಯಾಕೆ ಬಂಧಿಸಬೇಕು..? : ಕುಮಾರಸ್ವಾಮಿ ಪ್ರಶ್ನೆ

suddionenews
1 Min Read

ಮೈಸೂರು: 40% ಕಮೀಷನ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿ ಈಶ್ವರಪ್ಪ ವಿರುದ್ಧ ನೇರ ಆರೋಪ ಮಾಡಿದ್ದಾನೆ. ನನ್ನ ಸಾವಿಗೆ ಈಶ್ವರಪ್ಪನೇ ನೇರ ಕಾರಣ ಅಂತೇಳಿ ಡೆತ್ ನೋಟ್ ವಾಟ್ಸಾಪ್ ಮಾಡಿ ಸಾವನ್ನಪ್ಪಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಗಿ ಪಟ್ಟು ಹಿಡಿದಿದೆ. ರಾಜೀನಾಮೆ ಕೊಟ್ಟರೆ ಸಾಲದು ಅವರ ಬಂಧನವಾಗಲೇಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ, ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ.

ಈಶ್ವರಪ್ಪ ಅವರನ್ನು ಯಾಕೆ ಬಂಧಿಸಬೇಕೆಂದು ಕೇಳಿರುವ ಕುಮಾರಸ್ವಾಮಿ, ನೈಕಿಹ ಹೊಣೆ ಹೊತ್ತು ಈಶ್ವರಪ್ಪ ಈಗ ರಾಜೀನಾಮೆ ನೀಡಿದ್ದಾರೆ. ಆದರೂ ಈಶ್ವರಪ್ಪ ಅವರನ್ನು ಯಾಕೆ ಬಂಧಿಸಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಕಾಂಗದರೆಸ್ ನಾಯಕರು ಈ ಸಂಬಂಧ ಪಟ್ಟು ಬಿಡದೆ ಈಶ್ವರಪ್ಪ ಅವರ ಬಂಧನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *