Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತದಲ್ಲಿ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಏಕೆ ಬೇಕು? : ಪ್ರೊ.ಎನ್.ಡಿ.ಗೌಡ

Facebook
Twitter
Telegram
WhatsApp

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಡಿ.11): ಭಾರತದಲ್ಲಿ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಏಕೆ ಬೇಕು? ಒಂದು ದೇಶ ಅಂದ ಮೇಲೆ ಎಲ್ಲರಿಗೂ ಒಂದೆ ಕಾನೂನು ಇರಬೇಕೆಂದು ಸರಸ್ವತಿ ಕಾನೂನು ಕಾಲೇಜಿನ ಪ್ರೊ.ಎನ್.ಡಿ.ಗೌಡ ಅಭಿಪ್ರಾಯಪಟ್ಟರು.

ರೋಟರಿ ಬಾಲಭವನದಲ್ಲಿ ನಡೆದ ಚಿನ್ಮುಲಾದ್ರಿ ರೋಟರಿ ಕ್ಲಬ್‍ನ ವಾರದ ಸಭೆಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರಿಮಿನಲ್ ಕಾನೂನು ಎಲ್ಲಾ ಜಾತಿ ಧರ್ಮಕ್ಕೂ ಸಮಾನವಾಗಿರುವಂತೆ ವೈಯಕ್ತಿಕ ಕಾನೂನು ಬಂದಾಗ ಹಿಂದು ಧರ್ಮಕ್ಕೆ ಬೇರೆ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಏಕೆ ಬೇರೆ ಇರಬೇಕು. ಒಂದು ದೇಶವೆಂದ ಮೇಲೆ ಒಂದೆ ಕಾನೂನು ಎಲ್ಲಾ ಜಾತಿ ಧರ್ಮಕ್ಕೂ ಅನ್ವಯಿಸಬೇಕು. ಹಿಂದು ಧರ್ಮದಲ್ಲಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾದರೆ ಅಪರಾಧವೆನ್ನುವುದಾದರೆ ಮುಸ್ಲಿಂ ಧರ್ಮದಲ್ಲಿ ಹೆಂಡತಿಗೆ ತಲಾಖ್ ಕೊಟ್ಟು ಇನ್ನೊಂದು ಮದುವೆಯಾಗಬಹುದು. ಇದಕ್ಕೆ ಕಾನೂನು ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದರು.

ಕ್ರಿಮಿನಲ್ ಕೋಡ್ ಎಲ್ಲರಿಗೂ ಕಾಮನ್ ಇದ್ದಾಗ, ವೈಯಕ್ತಿಕ ಸಿವಿಲ್ ಸಂಹಿತೆ ಪ್ರಶ್ನೆ ಬಂದಾಗ ಬೇರೆ ಬೇರೆ ಕಾನೂನು ಏಕೆ? ಒಂದೆ ದೇಶದಲ್ಲಿ ಒಂದೊಂದು ಜಾತಿ ಧರ್ಮಕ್ಕೆ ಒಂದೊಂದು ಕಾನೂನು ಏಕೆ ಬೇಕು. ಏಕ ರೀತಿಯ ಕಾನೂನು ಒಳ್ಳೆಯದು ಎಂದು ಹೇಳಿದರು.
ಚಿನ್ಮುಲಾದ್ರಿ ರೋಟರಿ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಸಂಗಂ ಅಧ್ಯಕ್ಷತೆ ವಹಿಸಿದ್ದರು.

ಜಂಟಿ ಕಾರ್ಯದರ್ಶಿ ಮಳಲಿ, ಎಂ.ರಂಗಪ್ಪ, ಲವಕುಮಾರ್, ಶಿಲ್ಪ, ದಿವಾಕರ್ ವೇದಿಕೆಯಲ್ಲಿದ್ದರು.
ಹೆಲಿಕ್ಯಾಪ್ಟರ್ ದುರಂತದಲ್ಲಿ ಮಡಿದ ಹದಿಮೂರು ಮಂದಿ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

error: Content is protected !!