ಇದ್ದಕ್ಕಿದ್ದ ಹಾಗೇ ಸಚಿವ ಸುಧಾಕರ್ ಯಕ್ಷಗಾನ ವೇಷ ಹಾಕಿದ್ದು ಯಾಕೆ..?

1 Min Read

ಕಾರವಾರ: ಸಚಿವ ಸುಧಾಕರ್ ಅವರು ಯಕ್ಷಗಾನ ವೇಷ ಹಾಕಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟ ವೈರಲ್ ಆಗುತ್ತಿವೆ. ಅಷ್ಟೇ ಅಲ್ಲ ಯಕ್ಷಗಾನದ ವೇಷತೊಟ್ಟು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯುವರಾಜನ ವೇಷದಲ್ಲಿ ಸಚುವ ಸುಧಾಕರ್ ಫೋಟೋಗೆ ಪೋಸ್ ನೀಡಿದ್ದಾರೆ.

ಉತ್ತರ ಕನ್ನಡದ ಭಟ್ಕಳ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಅವರು ಕೂಡ ಸರ್ಕಾರಿ ಆಸ್ಪತ್ರೆಯ ಪರಿಶೀಲನೆಗಾಗಿ ಭಟ್ಕಳಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಸುನೀಲ್ ನಾಯ್ಕ್ ಅವರು ಸುಧಾಕರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದರು.

ಸುನಿಲ್ ನಾಯ್ಕ್ ಅವರ ಮನೆಗೆ ಹೋಗಿ, ಆತಿಥ್ಯವನ್ನು ಸ್ವೀಕರಿಸಿದ ಸಚಿವ ಸುಧಾಕರ್ ಅವರು ಯಕ್ಷಗಾನವನ್ನು ನೋಡಿದ್ದಾರೆ. ನೋಡುತ್ತಾ ಹಾಗೇ ಮೈಮರೆತಿದ್ದಾರೆ. ಯಕ್ಷಗಾನವೆಲ್ಲಾ ಮುಗಿದ ಬಳಿಕ ತಾವೇ ಪ್ರೀತಿಯಿಂದ ಯಕ್ಷಗಾನ ಡ್ರೆಸ್ ಹಾಕಿದ್ದಾರೆ. ಯುವರಾಜನ ವೇಷದ ಕಿರೀಟ ತೊಟ್ಟು, ನಗೆಯೊಂದನ್ನು ಬೀರಿದ್ದಾರೆ. ಈ ವೇಷಭೂಷಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *