ಹೊಸಪೇಟೆಯಲ್ಲಿ 19 ವರ್ಷದ ಯುವತಿ ಸನ್ಯಾಸತ್ವ ಸ್ವೀಕರಿಸಿದ್ದು ಯಾಕೆ..?

suddionenews
1 Min Read

ವಿಜಯನಗರ: ಆಧ್ಯಾತ್ಮದ ಕಡೆಗೆ ಒಲವಿದ್ದ ಯುವತಿ ಇದೀಗ ಜೈನ ಧರ್ಮದ ಸಾಂಪ್ರದಾಯದಂತೆ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ. ಮುಮುಕ್ಷ ವಿಧಿಕುಮಾರಿ, ಮನೆಯವರೆಲ್ಲರ ಒಪ್ಪಿಗೆ ಪಡೆದು ದೀಕ್ಷೆ ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಪ್ರಮುಖರು ಸೇರಿದಂತೆ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಹೆಚ್ ಎಲ್ ಗವಿಯಪ್ಪ, ಕಾಂಗ್ರೆಸ್ ಮುಖಂಡ ಇಮಾಜ್ ನಿಯಾಜಿ ಸೇರಿದಂತೆ ಹಲವರು ಭಾಗಿಯಾಗದಿದ್ರು.

ಮುಮುಕ್ಷಾ ವಿಧಿ ಓದುವುದರಲ್ಲಿ ತುಂಬಾ ಮುಂದೆ ಇದ್ದರು. ಎಸ್ಎಸ್ಎಲ್ಸಿ 94% ಹಾಗೂ ಪಿಯುಸಿಯಲ್ಲಿ 99% ಅಂಕ ಗಳಿಸಿದ್ದರು. ಹೊಸಪೇಟೆಯ ರೇಖಾ ದೇವಿ ಹಾಗೂ ದಿ. ಕಾಂತಿಲಾಲ್ ಅವರ ಮೂರನೇ ಮಗಳು ಮುಮುಕ್ಷಾ ವಿಧಿ.

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಪಡೆದಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಹೊಸಪೇಟೆಯ ಮಲ್ಲಿಗೆ ಹೊಟೇಲ್ ನಲ್ಲಿ, ಆದಿನಾಥ ಜೈನ ಶ್ವೇತಾಂಬರ ಮುನಿಗಳ ನೇತೃತ್ವದಲ್ಲಿ ಮತ್ತು ನರರತ್ನ ಸೂರಿಶ್ವರ ಶ್ರೀ ನೇತೃತವದಲ್ಲಿ ದೀಕ್ಷೆ ಪಡೆದಿದ್ದಾರೆ. ದೀಕ್ಷೆ ನೀಡುವ ಅಂಗವಾಗಿ ಇಂದು ನಗರದಲ್ಲಿ ಅದ್ದೂರಿ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೋಭಾಯಾತ್ರೆಯಲ್ಲಿ ಮುಮುಕ್ಷಾ ವಿಧಿ ಕುಣಿದು ಕುಪ್ಪಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *