ಹೆರಿಗೆಗೆಂದು ದಾಖಲಾಗಿದ್ದ ಶಿಲ್ಪ ಸಾವು : ತನಿಖೆಗಾಗಿ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಕಳೆದ 9 ರಂದು ದಾಖಲಾಗಿದ್ದ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿಯ ಬೊಮ್ಮನಕುಂಟೆ ಗ್ರಾಮದ ಶಿಲ್ಪ ಸಾವಿಗೆ ಕಾರಣರಾದ ವೈದ್ಯರುಗಳಾದ ಸೇತುರಾಮ್, ರವೀಂದ್ರ ಹಾಗೂ ಮೂವರು ನರ್ಸ್‍ಗಳನ್ನು ಕೂಡಲೆ ಅಮಾನತ್ತುಗೊಳಿಸಿ ತನಿಖೆಗೊಳಪಡಿಸುವಂತೆ ಕರುನಾಡ ವಿಜಯಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

 

ಮಾದಿಗ ಜನಾಂಗಕ್ಕೆ ಸೇರಿದ ಶಿಲ್ಪಳ ಹೆರಿಗೆಗೆ ಲಂಚ ನೀಡಲಿಲ್ಲವೆಂದು ವೈದ್ಯರುಗಳು ನಿರ್ಲಕ್ಷೆ ವಹಿಸಿದ ಪರಿಣಾಮ ಸಾವು ಸಂಭವಿಸಿದ್ದು, ಮಗುವನ್ನು ಬಸವೇಶ್ವರ ಆಸ್ಪತ್ರೆಯ ಐಸಿ.ಯಲ್ಲಿರಿಸಲಾಗಿದೆ. ಜಿಲ್ಲಾಸ್ಪತ್ರೆಯ ಕೆಲವು ವಿಭಾಗಗಳಲ್ಲಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿಲ್ಲ. ಹಣ ಗಳಿಕೆಯೆ ಇಲ್ಲಿನ ವೈದ್ಯರುಗಳ ದಂಧೆಯಾಗಿದೆ. ತಪ್ಪಿತಸ್ಥರ ವೈದ್ಯರುಗಳ ವಿರುದ್ದ ಎಫ್.ಐ.ಆರ್.ದಾಖಲಿಸಿ ಮೃತ ಶಿಲ್ಪಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷ್ಷೆ ವೀಣಗೌರಣ್ಣ ಹಾಗೂ ಮೃತ ಶಿಲ್ಪಳ ಸಂಬಂಧಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article