in

ಸಿದ್ದರಾಮಯ್ಯಗೆ ಯಾವ ಕ್ಷೇತ್ರ ಬೆಸ್ಟ್..? ಕೆಎನ್ ರಾಜಣ್ಣ ಹೇಳಿದ್ದೇನು..?

suddione whatsapp group join

ತುಮಕೂರು: 2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಆದರೆ ಚುನಾವಣಾ ಪ್ರಚಾರದ ಅಬ್ಬರ ಮಾತ್ರ ಜೋರಾಗಿದೆ. ಈ ನಡುವೆ ಸಿದ್ದರಾಮಯ್ಯ ಅವರ ರಾಜಕೀಯದ ಭವಿಷ್ಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಲೇ ಇರುತ್ತದೆ. ಅದುವೆ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಬೇಕಾ..? ವರುಣಾ ಕ್ಷೇತ್ರ ಬೆಸ್ಟ್ ಹಾ ಎಂಬ ಪ್ರಶ್ನೆಗಳು ಓಡಾಡುತ್ತಿವೆ.

ಈ ಮಧ್ಯೆ ಕಾಂಗ್ರೆಸ್ ಮಾಜಿ ಶಾಸಕ ಕೆ ಎನ್ ರಾಜಣ್ಣ ಈ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರಕ್ಕಿಂತ ವರುಣಾನೇ ಸೇಫೇಸ್ಟ್ ಪ್ಲೇಸ್. ವರುಣಾದಲ್ಲಿ ಯಾವುದೆ ರಿಸ್ಕ್ ಇಲ್ಲದೆಯೂ ಗೆಲ್ಲಬಹುದು. ಯಾಕಂದ್ರೆ ಕೋಲಾರದಲ್ಲಿ ಈಗಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಕರಪತ್ರ ಹಂಚುತ್ತಿದ್ದಾರೆ. ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಅವರು ಸೋಲಿಸಿದ್ರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರ ಉತ್ತಮ ಎಂದಿದ್ದಾರೆ.

ಇನ್ನು ಈ ಬಾರಿ ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಅವರಿಗೆ ಸಿದ್ದರಾಮಯ್ಯ ಬಿಟ್ಟುಕೊಟ್ಟಿದ್ದು ಆ ಬಗ್ಗೆಯೂ ಮಾತನಾಡಿರುವ ರಾಜಣ್ಣ, ಯತೀಂದ್ರ ಅವರಿಗೆ ಯಾವುದಾದರೂ ಬೇರೆ ಅವಕಾಶ ಕೊಡಬಹುದು. ಸಿದ್ದರಾಮಯ್ಯ ಅವರು ವರುಣಾದಿಂದ ಸ್ಪರ್ಧೆ ಮಾಡಿದರೆ ಅವರಿಗೆ ಸಮಯದ ಉಳಿತಾಯವೂ ಆಗುತ್ತದೆ. ಈ ಕ್ಷೇತ್ರದಲ್ಲಿ ನಿಂತು ಬೇರೆ ಕ್ಷೇತ್ರವನ್ನು ನೋಡಿಕೊಳ್ಳಬಹುದು ಎಂದು ಕೆ ಎನ್ ರಾಜಣ್ಣ ಸಲಹೆ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ನಂದಮೂರಿ ತಾರಕರತ್ನ Health update ; ಆರೋಗ್ಯ ಸ್ಥಿರ, ಮುಂದುವರಿದ ಚಿಕಿತ್ಸೆ

ಆದರ್ಶ ಗುರಿಯಲ್ಲದ ಮನುಷ್ಯನ ಜೀವನ ವ್ಯರ್ಥ : ಸರ್ದಾರ್ ಸೇವಾಲಾಲ್ ಸ್ವಾಮೀಜಿ