ಅಪ್ಪು ಪರ್ವದಲ್ಲಿ ಯಾರೆಲ್ಲಾ ಕಲಾವಿದರು ಇರಲಿದ್ದಾರೆ ಹೇಗಿರುತ್ತೆ ‘ಗಂಧದ ಗುಡಿ’ ಪ್ರಿರಿಲೀಸ್ ಇವೆಂಟ್..?

suddionenews
1 Min Read

ಬೆಂಗಳೂರು: ಅಪ್ಪುಗೆ ನಟಿಸಿರುವಂತ ಸಿನಿಮಾ ಕಡೆಯದಾಗಿ ಉಳಿದಿರುವುದು ಗಂಧದ ಗುಡಿ. ಅದರಲ್ಲೂ ಗಂಧದ ಗುಡಿಯನ್ನು ಸಿನಿಮಾವಾಗಿ ನೋಡುವುದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಎಮೋಷನ್ ಆಗಿ ನೋಡಲಾಗುತ್ತಿದೆ. ಅಪ್ಪು ಈ ಡಾಕ್ಯುಮೆಂಟರಿ ಸಿನಿಮಾದಲ್ಲಿ ನಟಿಸಿಲ್ಲ, ಜೀವಿಸಿದ್ದಾರೆ. ಹೀಗಾಗಿ ಗಂಧದ ಗುಡಿ ಬಹಳ ಮುಖ್ಯವಾಗಲಿದೆ.

ಅಕ್ಟೋಬರ್ 29ಕ್ಕೆ ಅಪ್ಪು ನಿಧನರಾಗಿ ಒಂದು ವರ್ಷ. ಈ ಒಂದು ವರ್ಷದಲ್ಲಿ ಅವರಿಲ್ಲ ಎಂಬ ನೋವಿನ ಜೊತೆಗೆ ಅವರನ್ನ ಅವರ ಸಿನಿಮಾಗಳ ಮೂಲಕ ಜೀವಂತವಾಗಿರಿಸಿಕೊಂಡಿದ್ದಾಋ. ಆದರೆ ಇದು ಕಡೆಯ ಸಿನಿಮಾ ಎಂಬ ನೋವು ಎಲ್ಲರನ್ನು ಕಾಡುತ್ತಿದೆ. ಇನ್ನು ಅಪ್ಪು ನಟಿಸಲ್ಲವಲ್ಲ ಎಂಬ ದುಃಖ ಹೆಚ್ಚಾಗುತ್ತಿದೆ. ಗಂಧದ ಗುಡಿ ಅ.28 ರಿಲೀಸ್ ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಅ.21 ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿ ಪ್ರಿರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಪ್ರಿರಿಲೀಸ್ ಇವೆಂಟ್ ಗೆ ಘಟಾನುಘಟಿ ನಾಯಕರು ಸೇರಲಿದ್ದಾರೆ. ಯಶ್, ಸುದೀಪ್, ಧ್ರುವ ಸರ್ಜಾ, ಡಾಲಿ ಧನಂಜಯ್ ಸೇರಿದಂತೆ ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳು ವೇದಿಕೆಯಲ್ಲಿರಲಿದ್ದಾರೆ. ಅದರ ಜೊತೆಗೆ ಕಮಲ್ ಹಾಸನ್, ಸೂರ್ಯ, ಬಾಹುಬಲಿ ಖ್ಯಾತಿ ರಾಣಾ ದಗ್ಗು ಬಾಟಿ ಸೇರಿದಂತೆ ದಕ್ಷಿಣ ಕನ್ನಡದ ದೊಡ್ಡ ಸ್ಟಾರ್ ಗಳು ಪ್ರಿರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಖುದ್ದಾಗಿ ಭೇಟಿ ನೀಡಿ ಎಲ್ಲರನ್ನು ಆಹ್ವಾನಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *