Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ ಗುಡ್ ನ್ಯೂಸ್ ಏನು ?

Facebook
Twitter
Telegram
WhatsApp

 

ಬೆಂಗಳೂರು: ಈಗಾಗಲೇ ಶಾಲೆಗಳು ಆರಂಭವಾಗಿದೆ. ಮಕ್ಕಳು ತರಗತಿಗಳಿಗೆ ಹೋಗುತ್ತಿದ್ದಾರೆ. ಪಠ್ಯ ಪುಸ್ತಕ, ಯೂನಿಫಾರ್ಮ್ ವಿಚಾರದ ಜೊತೆಗೆ ಹೈಸ್ಕೂಲ್ ಮಕ್ಕಳಿಗೆ ಶಿಕ್ಷಣದ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಶಾಲೆಯಲ್ಲಿ ಮೊಟ್ಟೆ ನೀಡುವ ಬಗ್ಗೆ ಮಾತನಾಡಿದ್ದು, ಹೈಸ್ಕೂಲ್ ಮಕ್ಕಳಿಗೂ ಮೊಟ್ಟೆ ನೀಡುವ ವಿಚಾರವಾಗಿ ಮಾತನಾಡಿದ್ದಾರೆ.

 

ಈ ಬಗ್ಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ವರ್ಷಕ್ಕೆ 42 ಬಾರಿ ಮೊಟ್ಟೆ ನೀಡುವ ನಿಯಮ ರೂಪಿಸಿತ್ತು. ಮಕ್ಕಳಿಗೆ ಹೆಚ್ಚು ಎಂದರೆ ಎರಡೆರಡು ಮೊಟ್ಟೆ ನೀಡಿತ್ತು. ನಿಯಮದ ಪ್ರಕಾರ ಮಕ್ಕಳಿಗೆ ವಾರಕ್ಕೊಂದು ಮೊಟ್ಟೆ ನೀಡಬೇಕು. ಮೋದಲು ನೀಡಬೇಕಾದ ಒಂದು ಮೊಟ್ಟೆಯಾದರೂ ನೀಡಿ ಎಂದು ಹೇಳಿದ್ದೇನೆ. ಇನ್ನು ಎರಡು ಮೊಟ್ಟೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈ ಮುಂಚೆ ಬರೀ8ನೇ ತರಗತಿವರೆಗೆ ಮಾತ್ರ ಮೊಟ್ಟೆ ನೀಡುವ ನಿಯಮವಿತ್ತು. ಆದರೆ ನಾನು 9 & 10ನೇ ತರಗತಿವರೆಗೆ ಮೊಟ್ಟೆ ನೀಡಬೇಕೆಂದು ಸಿಎಂ ಬಳಿ ಮನವಿ ಮಾಡಿದ್ದೇನೆ.

ನಾನು ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದು ಒಟ್ಟಿಗೆ ಆಯ್ತು. ಹೀಗಾಗಿ ಆದಷ್ಟು ಬೇಗ ಎಲ್ಲವನ್ನು ಸರಿ ಮಾಡುತ್ತೇನೆ. 150 ಪೇಜ್​​ ಪಠ್ಯಪುಸ್ತಕ ಪರಿಷ್ಕರಣೆ ಆಗಲಿದೆ. ಇದಕ್ಕೆ 20 ಲಕ್ಷ ರೂಪಾಯಿ ಬಜೆಟ್​ ಬೇಕು. ಈ ಬಗ್ಗೆ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ಮಾತಾಡಿದ್ದೇವೆ. ಇನ್ನು, 10 ದಿನಗಳಲ್ಲಿ ಪುಸ್ತಕಗಳು ಹೋಗಬೇಕು. ಅದಕ್ಕಾಗಿ ಸಮಿತಿ ಮಾಡಿ ಬೇರೆ ನಿಯಮ ಮಾಡಬೇಕು ಎಂದುಕೊಂಡಿದ್ದೇನೆ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳಲು ಆಗಲ್ಲ.. ಬರದೆ ಇದ್ದರೆ ಅರೆಸ್ಟ್ ಮಾಡ್ತೀವಿ : ಜಿ ಪರಮೇಶ್ವರ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಹಾಸನದ ಹಾದಿ ಬೀದಿಯಲ್ಲಿ ಚೆಲ್ಲಾಡಿವೆ. ಈ ವಿಚಾರ ಬೆಳಕಿಗೆ ಬಂದ ಕೂಡಲೇ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ‌. ಇದರ ಬೆನ್ನಲ್ಲೇ ಪ್ರಜ್ವಲ್

ವ್ಯಾಕ್ಸಿನ್ ಹಾಕಿಸಿಕೊಂಡಿದ್ದಕ್ಕೆ ಅಪ್ಪುಗೆ ಹಾರ್ಟ್ ಅಟ್ಯಾಕ್ ಆಯ್ತಾ..? ವೈರಲ್ ಆಗ್ತಿದೆ ಪುನೀತ್ ಫೋಟೋ..!

ಕೊರೊನಾ ವೈರಸ್ ಕೊಟ್ಟ ಕಾಟ ಅಷ್ಟಿಷ್ಟಲ್ಲ. ನಷ್ಟದ ಜೊತೆಗೆ ಸಾವು ನೋವುಗಳಾಗಿವೆ. ಈಗಲೂ ಅದೆಷ್ಟೋ ಕುಟುಂಬಗಳು ಕೊರೋನಾದಿಂದ ನೋವು ಅನುಭವಿಸುತ್ತಿವೆ. ಕೊರೋನಾ ಎಂದರೆ ಸಾಕು ಒಂದು ಕ್ಷಣ ಹಾರ್ಟ್ ನಿಂತೇ ಹೋಗುತ್ತದೆ. ಇದರ ನಡುವೆ

ಮೋದಿ ನನ್ನ ಹೃದಯದಲ್ಲಿದ್ದಾರೆ, ಫೋಟೋ ಬಳಕೆಗೆ ಅನುಮತಿ ಸಿಕ್ಕಿದೆ : ಕೆ. ಎಸ್. ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಅಖಾಡದಲ್ಲಿ ನಿಂತಿದ್ದಾರೆ. ಆರಂಭದಿಂದಲೂ ಪ್ರಧಾನಿ ಮೋದಿಯವರ ಫೋಟೋವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ನಾಯಕರು

error: Content is protected !!