ಶ್ರೀ ಪ್ರಸನ್ನಾನಂದಪುರಿ ಸ್ವಾಮಿಜಿ ಆರೋಗ್ಯ ವಿಚಾರಿಸಿ ಸಿಎಂ ಕೊಟ್ಟ ಕಿವಿಮಾತೇನು?

1 Min Read

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹೈದರಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೃದಯದ ಶಸ್ತ್ರ ಚಿಕಿತ್ಸೆ ಕೂಡ ನಡೆದಿದೆ , ಈಗ ಸ್ವಾಮೀಜಿ ಚೇತರಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು , ಆರೋಗ್ಯವನ್ನ ವಿಚಾರಿಸಲು ಕರೆ ಮಾಡಿದ್ದು ಖುದ್ದು ಸ್ವಾಮಿಗಳೇ ಸಿಎಂ ಜೊತೆ ಮಾತನಾಡಿದ್ದಾರೆ.ನಾನೀಗ ಗುಣಮುಖನಾಗುತ್ತಿದ್ದೇನೆ, ನನ್ನ ಹೃದಯಕ್ಕೆ 2-3 ಸ್ಟಂಟ್ ಹಾಕಿದ್ದಾರೆ ಎಂದು ಸ್ವಾಮೀಜಿ ಹೇಳಿದಾಗ ಹೃದಯದ ವಿಚಾರದಲ್ಲಿ ನೆಗಲೆಟ್ ಮಾಡಬಾರದು ಮೊದಲು ಆರೋಗ್ಯ ಮುಖ್ಯ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.

ಪ್ರಸನ್ನಾನಂದಪುರಿ ಸ್ವಾಮೀಜಿಗಳ ಕುಶಲೋಪರಿಯನ್ನು ಸಿಎಂ ಪೋನಿನ ಮೂಲಕ ವಿಚಾರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಕ್ತರಲ್ಲಿ ಸ್ವಾಮೀಜಿ ಗುಣಮುಖರಾಗುತ್ತಿದ್ದಾರೆ ಎಂಬ ಸಂತಸ ಮೂಡಿದೆ.

Share This Article
Enable Notifications OK No thanks