ಜೈನ‌ಮುನಿಗಳ ಹತ್ಯೆ ಬಗ್ಗೆ ಕೋಡಿಶ್ರೀ ಮಠದ ಸ್ವಾಮೀಜಿ ಹೇಳಿದ್ದೇನು..?

suddionenews
1 Min Read

 

 

ಕೋಡಿಮಠದ ಶ್ರೀಗಳು ನುಡಿಯುವ ಭವಿಷ್ಯದಲ್ಲಿ ಬಹಿತೇಕ ಭವಿಷ್ಯ ಸತ್ಯವಾಗಿದೆ. ಹೀಗಾಗಿ ಅವರು ಹೇಳುವ ಭವಿಷ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಮತ್ತೆ ಜಗತ್ತಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಇನ್ನಷ್ಟು ರೋಗ ರುಜಿನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

 

ದೇಶದ ಹಲವೆಡೆ ಪ್ರಾಕೃತಿಕ ವಿಕೋಪಗಳು ಸಂಭವಿಸಲಿವೆ. ಜೊತೆಗೆ ಮನುಷ್ಯರು ಮೃಗದಂತೆ ವರ್ತಿಸಿ, ವಿಕೋಪ ಸಂಭವಿಸಬಹುದು. ಸದ್ಯ ರಾಜ್ಯ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ. ಮಗು ಇನ್ನು ಈಗ ತಾನೇ ಹಾಲು ಕುಡಿಯಲು ಆರಂಭಿಸಿದೆ. ಮಗು ಚೆನ್ನಾಗಿ ಬೆಳೆಯಲಿ. ಯಾವುದೇ ಆತಂಕವಿಲ್ಲ ಎಂದಿದ್ದಾರೆ.

ಇನ್ನೂ ಜೈನ ಮುನಿಗಳ ಹತ್ಯೆ ನಡೆಯಬಾರದಿತ್ತು. ಆದರೆ ನಡೆದು ಹೋಯಿತು. ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು. ಈ ಘಟನೆಯಿಂದ ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆಂದು ತಿಳಿದಿದೆ. ಅಂಥವರಿಗೇ ಕಂಟಕ ಇದ್ದರೆ ಯಾರನ್ನೂ ತಾನೇ ಬಿಡಬಹುದು? ಮನುಷ್ಯನ ಕ್ರೌರ್ಯಕ್ಕೆ ಜೈನಮುನಿಗಳ ಕೊಲೆಯೊದು ಉದಾಹರಣೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *