ಒರಿಜಿನಲ್ ಜೆಡಿಎಸ್ ನಮ್ಮದೇ ಎಂದ ಇಬ್ರಾಹಿಂ ಮಾತಿಗೆ ನಸುನಕ್ಕು ದೇವೇಗೌಡ್ರು ಹೇಳಿದ್ದೇನು..?

1 Min Read

 

ಬೆಂಗಳೂರು: ಲೋಕಸಭೆಯಲ್ಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಜೆಡಿಎಸ್ ನಲ್ಲಿ ಸಾಕಷ್ಟು ಕಾರ್ಯಕರ್ತರಿಗೆ ಇಷ್ಟವಿಲ್ಲ. ಈ ಬೇಸರವನ್ನ ಈಗಾಗಲೇ ಸಾಕಷ್ಟು ಬಾರಿ ಹೊರ ಹಾಕಿದ್ದಾರೆ. ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಈಗಾಗಲೇ ಒರಿಜಿನಲ್ ಜೆಡಿಎಸ್ ನಮ್ಮದು. ಕುಮಾರಸ್ವಾಮಿ ಅವರನ್ನೇ ಉಚ್ಛಾಟನೆ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ ಎಂದಿದ್ದರು.

ಇಬ್ರಾಹಿಂ ಅವರ ಮಾತಿಗೆ ಈಗಾಗಲೇ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಸಿಲ್ಲಿ ವಿಷಯ. ಜೆಡಿಎಸ್ ನಂದೇ ಎನ್ನುವವರು ಒರಿಜಿನಲ್ ಬೋರ್ಡ್ ಹಾಕಿಕೊಳ್ಳಲಿ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅವರಿಗೆ ಬಿಟ್ಟಿದ್ದು. ಏನು ಮಾಡವೇಕು ಎಂಬುದು ನನಗೆ ಗೊತ್ತಿದೆ. ನಮ್ಮ ಹಿರಿಯರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಇನ್ನು ಈ ಸಂಬಂಧ ದೇವೇಗೌಡ ಅವರು ಪ್ರತಿಕ್ರಿಯೆ  ನೀಡುವುದಕ್ಕೂ ಮುನ್ನ ನಸು ನಕ್ಕಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮೂರ್ನಾಲ್ಕು ದಿನಗಳು ಕಳೆಯಲಿ. ಆಮೇಲೆ ಪಾರ್ಟಿ ಆಫೀಸ್ ಗೆ ಬರುತ್ತೀನಿ. ಬಳಿಕ ಮಾತನಾಡುತ್ತೀನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *