ಕಾಂಗ್ರೆಸ್ ಮತ್ತೆ ಸೇರಬೇಕೆಂಬ ಬಗ್ಗೆ ಸಿಪಿ ಯೋಗೀಶ್ವರ್ ಹೇಳಿದ್ದೇನು..?

suddionenews
1 Min Read

ರಾಮನಗರ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಿಪಿ ಯೋಗೀಶ್ವರ್ ಮಾತನಾಡಿದ್ದು, ನಾನು ಮತ್ತೆ ಡಿಕೆಶಿ ಜೊತೆ ಸೇರಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದಿದ್ದಾರೆ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಕಾಂಗ್ರೆಸ್ ಸೇರುವ ವಿಚಾರ ಕಪೋಕಲ್ಪಿತ ಎಂದಿದ್ದಾರೆ.

ನನಗೆ ಡಿಕೆ ಶಿವಕುಮಾರ್ ಅವರಿಂದ ಕಿರಿಕಿರಿಯಾಗಿದೆ. ಎರಡು ಸಾರಿ ಟಿಕೆಟ್ ತಪ್ಪಿಸಿದ್ದರು. ಡಿಕೆಶಿಯವರು 7 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆ ಸುರೇಶ್ ಕಾರ್ಯಕರ್ತರು ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ. ಅವರಿಗೆ ಕಾರ್ಯಕ್ರಮ ನಡೆಯುವುದು ಇಷ್ಟವಿರಲಿಲ್ಲ. ಅವರ ನಡವಳಿಕೆ ಅವರ ಹಿನ್ನೆಲೆ ತೋರಿಸುತ್ತದೆ. ಅವರ ಈ ಗುಂಡಾಗಿರಿ ವರ್ತನೆ ನಿಲ್ಲಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಸಹ ಅವರಿಗೆ ಸಹಕಾರ ಕೊಡುತ್ತಾರೆ . ಹಿಂದೆ ನಾನು ಅರಣ್ಯ ಸಚಿವನಾಗಿದ್ದಾಗ, ಅವರ ಅಕ್ರಮ ಕಲ್ಲಿನ ಕ್ವಾರಿಗಳನ್ನ ಬಂದ್ ಮಾಡಿಸಿದ್ದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *