ಸೋತಿರುವ ನಿಖಿಲ್ ಕುಮಾರಸ್ವಾಮಿಗೆ ಅಖಿಲೇಶ್ ಯಾದವ್ ಹೇಳಿದ್ದೇನು..?

1 Min Read

 

ನಿಖಿಲ್ ಕುಮಾರಸ್ವಾಮಿ ಅದ್ಯಾಕೋ ಈ ಬಾರಿಯೂ ಚುನಾವಣೆಯಲ್ಲಿ ಸೋತಿದ್ದಾರೆ. ಜನ ಎರಡನೇ ಬಾರಿಯೂ ಕೈಹಿಡಿಯಲಿಲ್ಲ. ಮಂಡ್ಯ ಲೋಕಸಭಾ ಚುನಾವಣೆ ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವುದು ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಶಾಕ್ ಆಗಿದೆ.

ಇದೀಗ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಭೇಟಿ ಮಾಡಿದ್ದು, ಸಮಾಧಾನದ ಮಾತುಗಳನ್ನ ಆಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಒಂದಷ್ಟು ಧೈರ್ಯ ತುಂಬಿದ್ದಾರೆ. ವಿಧಾನಸಭೆ ಚುನಾವಣೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಬ್ರದರ್ ಅಂತ ಧೈರ್ಯ ತುಂಬಿದ್ದಾರೆ.

ರಾಮನಗರದಲ್ಲಿ ನೀವೂ ಸೋತಿರುವುದಕ್ಕೆ ಆತಂಕ ಬೇಡ. ಸೋಲು ರಾಜಕೀಯದಲ್ಲಿ ಸಾಮಾನ್ಯ ಗೆಲ್ಲುವುದಕ್ಕೆ ದಾರಿ ತೋರಿಸುತ್ತದೆ. ನಾನು ಕೂಡ ಸೋತಿದ್ದೇನೆ. ಗೆಲ್ಲುವುದಕ್ಕೆ ಮತ್ತೆ ಪ್ರಯತ್ನ ಮಾಡ್ತಾ ಇದ್ದೀನಿ. ಜೆಡಿಎಸ್ ಗೆ ತನ್ನದೆ ಆದ ಇತಿಹಾಸವಿದೆ. ತಾತ ಪ್ರಧಾನಿಯಾಗಿದ್ದವರು. ತಂದೆ ಎರಡು ಬಾರಿ ಸಿಎಂ ಆಗಿದ್ದವರು. ಕರ್ನಾಟಕದಲ್ಲಿ ನಿಮ್ಮದೇ ಆದ ವರ್ಚಸ್ಸು ಇದೆ. ಅದನ್ನ ಹೆಚ್ಚಿಸಿಕೊಳ್ಳಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *