ಡಿ.31 ರಂದು ಕರ್ನಾಟಕ ಬಂದ್ : ನಿಖಿಲ್ ಕುಮಾರಸ್ವಾಮಿ ಏನಂದ್ರು..?

suddionenews
1 Min Read

ರಾಮನಗರ: ಎಂಇಎಸ್ ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಡಿ.31 ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ಕರೆ ನೀಡಿವೆ. ಇದಕ್ಕೆ ಸಾಕಷ್ಟು‌ ಪರ ವಿರೋಧ ವ್ಯಕ್ತವಾಗ್ತಾ ಇದೆ. ಇದೀಗ ಜೆಡಿಎಸ್ ಯುವ ನಾಯಕ, ನಟ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಸಿನಿಮಾ ಪ್ರಮೋಷನ್ ಗಾಗಿ ರಾಮನಗರಕ್ಕೆ ಭೇಟಿ ನೀಡಿದ್ದ ನಿಖಿಲ್ ಕುಮಾರಸ್ವಾಮಿ, ಮಾಧ್ಯಮದ ಪ್ರಚಾರಕ್ಕಾಗಿ ಬಂದ್ ಮಾಡಬಾರದು ಎಂದಿದ್ದಾರೆ. ಡಿಸೆಂಬರ್ 31 ರಂದು ಬಂದ್ ಗೆ ಕರೆ ನೀಡಿರುವುದು ನಮ್ಮ ಚಿತ್ರರಂಗಕ್ಕೆ ತುಂಬಾ ನಷ್ಟ ಉಂಟು ಮಾಡುತ್ತದೆ. 31 ರಂದು ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ಅದೆಲ್ಲಕ್ಕೂ ಹೊಡೆತ ಬೀಳಲಿದೆ ಎಂದಿದ್ದಾರೆ.

ಸಾರ್ವಜನಿಕರಿಗೆ ಸಹಾಯವಾಗುತ್ತೆ ಎಂದರೆ ಬಂದ್ ಮಾಡಲು. ಆದ್ರೆ ಕೇವಲ ಮಾಧ್ಯಮದ ಪ್ರಚಾರಕ್ಕಾಗಿ ಬಂದ್ ಮಾಡುವುದು ಬೇಡ. ಈ ರೀತಿಯಾದ ಬಂದ್ ಅನ್ನು ನಾನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಸಿನಿಮಾ ರಿಲೀಸ್ ಆದ ಮೂರು ದಿನ ತುಂಬಾ ಮುಖ್ಯ. ಆ ದಿನಗಳಲ್ಲೇ ಕಲೆಕ್ಷನ್ ಸಿಗುವುದು. ಆದ್ರೆ ಅಂದೇ ಬಂದ್ ಮಾಡಿದ್ರೆ ನಿರ್ಮಾಪಕರಿಗೆ ನಷ್ಟವಾಗುತ್ತೆ. ಎಂದು ಬಂದ್ ಗೆ ಬೆಂಬಲವಿಲ್ಲವೆಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *