ಮುಖ್ಯಮಂತ್ರಿಯಾಗೋಕೆ ಎಷ್ಟು ಕೋಟಿ ಡಿಮ್ಯಾಂಡ್ ಇಟ್ಟುದ್ದರು ಗೊತ್ತಾ..? ಯತ್ನಾಳ್ ಹೇಳಿದ್ದೇನು..?

suddionenews
1 Min Read

ಬೆಳಗಾವಿ: ಶಾಸಕ ಯತ್ನಾಳ್ ತಮ್ಮದೇ ಸರ್ಕಾರದ ಮೇಲೆ ಆಗಾಗ ಗರಂ ಆಗುತ್ತಲೆ ಇರುತ್ತಾರೆ. ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಸಿಎಂ ಆಗುವ ವಿಚಾರಕ್ಕೂ ಹೊಸ ಬಾಂಬ್ ಹಾಕಿದ್ದಾರೆ. 2500 ಕೋಟಿ ಕೊಟ್ರೆ ನಿಮ್ಮನ್ನು ಸಿಎಂ ಮಾಡ್ತೀವಿ ಎಂದಿದ್ರಂತೆ.

ರಾಮದುರ್ಗದಲ್ಲಿ ಮಾತನಾಡಿದ ಅವರು, ಈ ರಾಜಕಾರಣದಲ್ಲಿ ಬಹಳ ಜನ ಕಳ್ಳರಿದ್ದಾರೆ. ಯಾರು ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸ್ತೀವಿ, ಜೆಪಿ ನಡ್ಡಾ ಅವರನ್ನು ಪರಿಚಯ ಮಾಡಿಸ್ತೀವಿ ಅಂತಾರೆ. ಹಾಗಂತ ದೆಹಲಿಯ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು.

2500 ಕೋಟಿ ರೆಡಿ ಮಾಡಿ ಇಡ್ರಿ ಎಂದಿದ್ದರು. ನಾನು ಅದಕ್ಕೆ ಕೇಳಿದೆ 2500 ಕೋಟಿ ಅಂದ್ರೆ ಏನು ಅಂದ್ಕೊಂಡಿದ್ದೀರಿ. ಕೋಣೆಯಲ್ಲಿ ಇಡುವುದೋ..? ಗೋದಾಮಿನಲ್ಲಿ ಇಡುವುದೋ..? ಹಂಗೆ ಟಿಕೆಟ್ ಕೊಡ್ತೀನಿ ಅಂತ ಎಲ್ಲಾ ಕಡೆ ಮೋಸ ಮಾಡ್ತಾರೆ. ನನಗಾ ಹೇಳ್ತಾರೆ 2500 ಕೋಟಿ ಸಜ್ಜ ಮಾಡಿ ಇಡಿ ಅಂತ. ನಾನು ವಾಜಪೇಯಿ ಅವರ ಬಳಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥ್ ಸಿಂಗ್, ಜೇಟ್ಲಿ ಅವರು ನನ್ನನ್ನು ಬಸನಗೌಡ ಅಂತ ಹೆಸರು ಹಿಡಿದು ಕರೀತಾರೆ. ಎಲೆಕ್ಷನ್ ಬರುತ್ತಿದೆ. ಈಗ ಈ ಥರದ ಎಲ್ಲವೂ ಆರಂಭವಾಗುತ್ತೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *