ಬೆಂಗಳೂರು: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಕೆಐಎಡಿಬಿಯಿಂದ ಭೂಸ್ವಾಧೀನ ವಿರೋಧಿಸಿ ರೈತರು ಹಲವು ದಿನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಸ್ವಾಧೀನ ವಿಚಾರದಲ್ಲಿ ರೈತರು ಪರ – ವಿರೋಧ ಇದ್ದಾರೆ. ಇದೆ ವೇಳೆ ಭೂಸ್ವಾಧೀನದ ಪರವಾಗಿರುವ ಮತ್ತೊಂದು ರೈತರ ಗುಂಪು ಜಮೀನು ಕೊಡಲು ಮುಂದಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಭೂಸ್ವಾಧೀನ ಸಂಬಂಧ ರೈತರ ನಡುವೆಯೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಈ ಸಂಬಂಧ ಸಚುವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಇದೆ ಮೊದಲೇನು ಅಲ್ಲ ಈ ಹಿಂದೆಯೂ ನೋಟಿಫಿಕೇಷನ್ ಆಗಿದೆ. ಅದು ಅವರು ಒಪ್ಪಿಕೊಂಡ ಮೇಲೆಯೇ ಆಗಿರೋದು. 500 ಎಕರೆ ಇದೆಯಲ್ಲ ಅವರು ಒಪ್ಪಿಕೊಂಡ ಮೇಲೆಯೇ ಹಿಂದೆ ನೋಟಿಫಿಕೇಷನ್ ಆಗಿರೋದು. ಆ ರೈತರು ಕೊಡುವುದಕ್ಕೆ ಬಹುಶಃ ಎಲ್ಲಾ ರೈತರು ರೆಡಿ ಇದ್ದಾರೆ. ಆ ರೈತರ ವಿಷಯ ಬೇರೆ ಈಗ. ಅದನ್ನು ಬಿಟ್ಟು ಹೋರಾಟ ಮಾಡ್ತಾ ಇರುವ ಬೇರೆಯದ್ದೇ ಇದೆ. ನಾಳೆ 15 ತಾರೀಖು ಮೀಟಿಂಗ್ ಇದೆ. ಮೀಟಿಂಗ್ ನಂತರ ಮುಖ್ಯಮಂತ್ರಿಗಳು ಅವರಿಗೆ ಏನು ಹೇಳಬೇಕು ಅದನ್ನ ಹೇಳ್ತಾರೆ.
ಅವರ ಹೋರಾಟ ಏನು ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಉಳಿಯಬೇಕು ಎಂಬುದು. ನಾವೂ ಸಹ ಅದಕ್ಕೆ ಒಳ್ಳೆಯ ರೇಟನ್ನೇ ಕೊಡ್ತೇವೆ. ಅನುಕೂಲ ಮಾಡಿ ಕೊಡ್ತೇವೆ. ಇಷ್ಟಾದ ಮೇಲೂ ಅವರು ಕೊಡಲ್ಲ ಅಂದ್ರೆ ಬಳಿಕ ಮುಖ್ಯಮಂತ್ರಿಗಳರೆ ಮಾತಾಡ್ತಾರೆ ಎಂದು ಭೂಸ್ವಾಧೀನದ ಬಗ್ಗೆ ಎಂಬಿ ಪಾಟೀಲ್ ಮಾತನಾಡಿದ್ದಾರೆ. ಒಂದು ಕಡೆ ಭೂಮಿ ಕೊಡಲ್ಲ ಎನ್ನುವ ರೈತರು ಇನ್ನೊಂದು ಕಡೆ ಕೊಡ್ತೀವಿ ಎಂಬ ರೈತರು. ಇದರಿಂದಾನೇ ಅರ್ಧ ಗೊಂದಲ ಮನೆ ಮಾಡಿದೆ.

