ಮುಳುಗುವ ಹಡಗೋ, ಮುಳುಗಿದ ಹಡಗೋ, ಎದ್ದು ಬರೋ ಸಾಮರ್ಥ್ಯವಿದೆ : ಸಂಸದ ಡಿ ಕೆ ಸುರೇಶ್

suddionenews
1 Min Read

 

ರಾಮನಗರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲೆಡೆ ಸೋತಿದೆ. ಇದು ರಾಜ್ಯ ಚುನಾವಣಾ ಮೇಲೂ ಪರಿಣಾಮ ಬೀರಬಹುದಾ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಸೋಲಿನ ಬಗ್ಗೆ ಸಂಸದ ಡಿ ಕೆ ಸುರೇಶ್ ಮಾತನಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಡಿ ಕೆ ಸುರೇಶ್ ಅವರು, ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತೆ. ಸೋಲಿನ ಕಾರಣದ ಬಗ್ಗೆ ನಮ್ಮ ನಾಯಕರು ಚರ್ಚಿಸುತ್ತಾರೆ. ಪಂಜಾಬ್ ನಲ್ಲಿ 6 ತಿಂಗಳಿನಿಂದ ಗೊಂದಲ ಸೃಷ್ಟಿಯಾಗಿತ್ತು. ಪಕ್ಷದ ಕಾರ್ಯಕರ್ತರಲ್ಲೇ ಈ ಗೊಂದಲ ಇತ್ತು. ಹೀಗಾಗಿ ನಮಗೆ ಪಂಜಾಬ್ ರಾಜ್ಯದಲ್ಲಿ ಹಿನ್ನಡೆಯಾಗಿದೆ. ಅದನ್ನ ಸರಿ ಮಾಡುವ ಕೆಲಸ ಆಗುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕುಗ್ಗಿದೆ ಎಂಬುದೆಲ್ಲಾ ಸುಳ್ಳು. 2023ರ ಚುನಾವಣೆಯಲ್ಲಿ ಬದಲಾವಣೆಯಾಗುತ್ತದೆ. ದಕ್ಷಿಣ ಭಾರತ ಚುನಾವಣಾ ರೀತಿ ನೀತಿಯೇ ಬೇರೆ. ಮುಳುಗುವ ಹಡಗೋ, ಮುಳುಗುತ್ತಿರುವ ಹಡಗೋ. ಎದ್ದು ಬರುವ ಸಾಮರ್ಥ್ಯ ಕಾಂಗ್ರೆಸ್ ಗೆ ಇದೆ.

ಐಟಿ, ಸಿಬಿಐ, ಚುನಾವಣಾ ಆಯೋಗದ ದುರ್ಬಳಕೆಯಾಗುತ್ತಿದೆ. ಹೀಗಾಗಿಯೇ ಬಿಜೆಪಿ 4 ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇರುತ್ತದೆ ಎಂದು ವಿಜಯಪುರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *