ಈಗ ನಮ್ಮ‌ ಮುಂದೆ ಸವಾಲಿದೆ : ಲಾಕ್ಡೌನ್ ಬಗ್ಗೆ ಸಿಎಂ ಹೇಳಿದ್ದೇನು..?

1 Min Read

ಬೆಂಗಳೂರು: ಸದ್ಯ ಎಲ್ಲರಲ್ಲೂ ಆತಂಕ ಶುರುವಾಗಿದೆ. ಒಂದು ಕಡೆ ಕರೊನಾ ಹೆಚ್ಚಳದ ಆತಂಕವಾದರೆ ಮತ್ತೊಂದು ಕಡೆ ಮತ್ತೆ ಲಾಕ್ಡೌನ್ ಮಾಡ್ತಾರಾ ಅನ್ನೋ ಭಯ. ಯಾಕಂದ್ರೆ ಕಳೆದ ಎರಡು ವರ್ಷದಿಂದ ಲಾಕ್ಡೌನ್ ಹುಟ್ಟಿಸಿರುವ ಭಯ ಅಷ್ಟಿಷ್ಟಲ್ಲ. ಸದ್ಯದ ಸ್ಥಿತಿಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ನಮ್ಮ ಮುಂದೆ ಸವಾಲಿದೆ ಎಂದಿದ್ದಾರೆ ಸಿಎಂ.

ಇಂದಿನಿಂದ 15-17 ವರ್ಷದವರೆಗಿನ ಮಕ್ಕಳಿಗೆ ಇಂದಿನಿಂದ ಲಸಿಕೆ ನೀಡಲು ಚಾಲನೆ ನೀಡಲಾಗಿದೆ. ಬಿಬಿಎಂಪಿ ಕಾಲೇಜಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, ಮೂರನೆ ಅಲೆ ಬಿಂಬಿತವಾಗಿದೆ. ಹೀಗಾಗಿ ಸಾಕಷ್ಟು ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲೇಬೇಕಾಗಿದೆ. ಈಗಾಗಲೇ ಗಡಿ ಭದ್ರತೆಯನ್ನು ಮಾಡಲಾಗಿದೆ.

ಜನ ಕೂಡ ಸಹಕರಿಸಬೇಕು. ಹೆಚ್ಚು ಟ್ರಾಕಿಂಗ್ ಮಾಡಲಾಗುತ್ತಿದೆ. ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೊರೊನಾ ಹೆಚ್ಚಳವಾಗುತ್ತಿದೆ. ನಮ್ಮ ಮುಂದೆ ದೊಡ್ಡ ಸವಾಲಿದೆ. ಕಠಿಣ ಕ್ರಮ ತೆಗೆದುಕೊಳ್ಳಲೆಬೇಕಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *