ನಾವೂ ಗಾಂಧೀಜಿ ಧರ್ಮ ಇಟ್ಟುಕೊಂಡೇ ಹೋಗುತ್ತಿರೋದು : ಸಚಿವ ಈಶ್ವರಪ್ಪ

suddionenews
1 Min Read

ಯಾದಗಿರಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತ ಹಿನ್ನೆಲೆ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಗೆದ್ದಿದೆ. ಜನ ಸಾಧನೆ ನೋಡದೆ ಹಿಂದುತ್ವ ನೋಡಿ ಮತ ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಈ ಹೇಳಿಕೆಗೆ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ಬಿಜೆಪಿ ಧರ್ಮ, ಗಲಭೆ ಆಧಾರದಲ್ಲಿ ಗೆದ್ದಿದೆ ಎಂದಿದ್ದಾರೆ. ಬಿಜೆಪಿ ಹೊರಟಿರುವುದೇ ಗಾಂಧೀಜಿ ಧರ್ಮ ಇಟ್ಟುಕೊಂಡು. ಕಾಂಗ್ರೆಸ್ ಭಯೋತ್ಪಾದಕ, ಮತಾಂಧ ಮುಸ್ಲಿಂ ರಿಗೆ ಬೆಂಬಲ ನೀಡುತ್ತೆ. ಈ ರೀತಿಯ ಬೆಂಬಲ ನೀಡುತ್ತಿರುವುದರಿಂದಲೇ ಕಾಂಗ್ರೆಸ್ ನಿರ್ನಾಮವಾಗುತ್ತಿದೆ.

ತಾಕತ್ತಿಲ್ಲದೆ ಕಾಂಗ್ರೆಸ್ ತಾಕತ್ತಿನ ಮಾತನಾಡ್ತಿದ್ದಾರೆ. ತಾಕತ್ತಿರುವ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತಿದ್ದಾರೆ. ಕಾಂಗ್ರೆದ್ ಸೋಲಿಸುವ ಶಕ್ತಿಶಾಲಿ ಪಡೆ ಬಿಜೆಪಿಯಲ್ಲಿದೆ. ಪಂಚರಾಜ್ಯದ ರೀತಿ ರಾಜ್ಯ ಚುನಾವಣೆಯಲ್ಲೂ ಆಗಲಿದೆ. ಕಾಂಗ್ರೆಸ್ ಪಕ್ಷ ರಾಜ್ಯ ಚುನಾವಣೆಯಲ್ಲೂ ಸೋಲಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *