ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬಾಳೋಣಾ ಎಂದ ಶಾಸಕ ಹ್ಯಾರೀಸ್

1 Min Read

ಬೆಂಗಳೂರು: ಇಂದು ವಿಧಾನಸಭಾ ಪಡಸಾಲೆಯಲ್ಲಿ ಹಿಜಾಬ್ ವಿಚಾರ ಭಾರೀ ಚರ್ಚೆಯಾಗಿದೆ. ಹಿಜಾಬ್ ವಿಚಾರದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಶಾಸಕ ಹ್ಯಾರೀಸ್ ನಾವೆಲ್ಲಾ ಅಣ್ಣ ತಮ್ಮಂದಿರಂತೆಯೇ ಇರೋಣಾ ಎಂದು ಸಲಹೆ ನೀಡಿದ್ದಾರೆ.

ನಮ್ಮ ನಿಮ್ಮೆಲ್ಲರ ರಕ್ತದ ಬಣ್ಣ ಒಂದೇ. ಇರುವುದು ಮೂರು ದಿನದ ಬಾಳು. ಈ ಕಿತ್ತಾಟ ಎಲ್ಲಾ ಯಾಕೆ..? ಬೇಕಾದ್ರೆ ಎಲ್ಲರೂ ಡಿಎನ್ಎ ಟೆಸ್ಟ್ ಮಾಡಿಸಿ ಒಂದೇ ಬರುತ್ತದೆ. ಹೀಗಾಗಿ ಇರುವಷ್ಟು ದಿನ ಅಣ್ಣ ತಮ್ಮಂದಿರಂತೆ ಬಾಳೋಣಾ ಎಂದು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಶಾಲೆಯಲ್ಲಿ ಓದುವಾಗ ಎಲ್ಲಾ ಅಣ್ಣ ತಮ್ಮಂದಿರು ಒಂದು ಎಂದು ಪಠ್ಯದಲ್ಲಿತ್ತು. ಈಗಲೂ ನಮ್ಮ‌ ಮನದಲ್ಲಿ ಅದೇ ಇದೆ. ನಾವೇನೂ ಸಾವಿರ ವರ್ಷ ಬದುಕುತ್ತೀವಾ..? ಇರುವ ಮೂರು ದಿನದ ಬದುಕಲ್ಲಿ ಕಿತ್ತಾಟ ಏಕೆ..? ಇಂಥ ಒಂದು ಬದುಕು ಬೇಕಾ..? ಅವರವರ ನಂಬಿಕೆ ಅವರನ್ನ ಕಾಪಾಡುತ್ತೆ. ನಮ್ಮಲ್ಲಿ ಕಿತ್ತಾಟ ತರುವ ಪ್ರಯತ್ನವೇಕೆ..? ಅಧಿಕಾರಕ್ಕಾಗಿನಾ..? ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *