ಅತ್ತ ಕುಟುಂಸ್ಥರಿಂದ ಅಪ್ಪುಗೆ ಪೂಜೆ ಇತ್ತ ಕಾವೇರಿ ತಟದಲ್ಲಿ ವಿನೋದ್ ರಾಜ್ ಪೂಜೆ..!

suddionenews
1 Min Read

ಮಂಡ್ಯ : ಕೇವಲ 46 ವರ್ಷಕ್ಕೆ ಇಡೀ ರಾಜ್ಯದ ಜನತೆಗೆ ರಾಜಕುಮಾರನಂತಿದ್ದ ಅಪ್ಪು ನಿಧನರಾಗಿದ್ದು, ಯಾರಿಗೂ ಅರಗಿಸಿಕೊಳ್ಳಲು ಆಗ್ತಿಲ್ಲ. ಇಂದು 11 ದಿನ. ಅವರ ಪುಣ್ಯ ಸ್ಮರಣೆಯನ್ನ ಇಡೀ ಕುಟುಂಬ ನೆರವೇರಿಸಿದೆ. ಇಂದು ಮನೆಯಲ್ಲೂ ಪುನೀತ್ ರಾಜ್‍ಕುಮಾರ್ ಅವರ ಫೋಟೋಗೆ ಸ್ಪೆಷಲ್ ಅಲಂಕಾರ ಮಾಡಿ, ಅಪ್ಪುಗೆ ಏನೆಲ್ಲಾ ತಿಂಡಿ ಇಷ್ಟ ಆ ತಿಂಡಿಯನ್ನೆಲ್ಲಾ ಮಾಡಿ ಎಡೆ ಇಡಲಾಗಿದೆ. ಹಾಗೇ ಸಮಾಧಿ ಬಳಿಯೂ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ.

ಈ ಮಧ್ಯೆ ವಿನೋದ್ ರಾಜ್ ಹಾಗೂ ಲೀಲಾವತಿ ಅವರು ಕೂಡ ಅಪ್ಪು ನಿಧನಕ್ಕೆ ಭಾರೀ ದುಃಖ ವ್ಯಕ್ತಪಡಿಸಿದ್ದಾರೆ. ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಕಾವೇರಿ ನದಿ ತೀರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಬಳಿಯ ಕಾವೇರಿ ನದಿಯ ಸಂಗಮದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಮೊದಲು ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆಯನ್ನ ಮಾಡಿದ್ರು. ಪೂಜೆ ಮುಗಿದ ಬಳಿಕ ಕಾವೇರಿ ನದಿಗೆ ತರ್ಪಣ ಬಿಟ್ಟ ವಿನೋದ್ ರಾಜ್, ಅಪ್ಪು ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *