ಕೊರೊನಾ ಯಾವಾಗ ಕಡಿಮೆಯಾಗುತ್ತೆ : ವಿನಯ್ ಗುರೂಜಿ ಹೇಳಿದ್ದೇನು..?

suddionenews
1 Min Read

ಚಿಕ್ಕಮಗಳೂರು: ಕಳೆದ ಎರಡೂವರೆ ವರ್ಷದಿಂದ ಜನ ಕೊರೊನಾದಿಂದ ತತ್ತರಿಸಿ ಹೋಗಿದ್ದಾರೆ. ಕೊರೊನಾ ಅದ್ಯಾವಾಗ ಕಡಿಮೆಯಾಗುತ್ತೋ ಅಂತ ಕಾಯ್ತಿದ್ದಾರೆ. ಈ ಬೆನ್ನಲ್ಲೇ ಒಮಿಕ್ರಾನ್ ಭೀತಿ ಹೆಚ್ಚಾಗಿದೆ. ಈ ಬಗ್ಗೆ ಭವಿಷ್ಯ ನುಡಿದಿರುವ ವಿನಯ್ ಗುರೂಜಿ, ಮಾರ್ಚ್, ಮೇ ತಿಂಗಳ ಹೊತ್ತಿಗೆ ಕೊರೊನಾ ದೇಶದಲ್ಲಿ ಇರಲ್ಲ ಎಂದಿದ್ದಾರೆ.

ಮುಳ್ಳಯ್ಯನಗಿರಿಯಲ್ಲಿ ಮಾತನಾಡಿದ ಅವರು, ಮಾರ್ಚ್ ಅಥವಾ ಮೇ ತಿಂಗಳ ಹೊತ್ತಿಗೆ ಕೊರೊನಾ ಇಡೀ ದೇಶದಲ್ಲಿ ಕೊರೊನಾ ದೂರವಾಗಬಹುದು. ಮನುಷ್ಯನಿಗೆ ಆತ್ಮಸ್ಥೈರ್ಯ ಮುಖ್ಯ. ಆತ್ಮವಿಶ್ಚಾಸ ಕಳೆದುಕೊಳ್ಳಬಾರದು ಎಂದಿದ್ದಾರೆ.

ಮ್ಯಾಜಿಕ್ ಆಗಲಿ, ಪವಾಡವಾಗಲಿ ಅಂತ ಕೈಕಟ್ಟಿ ಕುಳಿತುಕೊಳ್ಳಬಾರದು. ನಮ್ಮ ಪ್ರಯತ್ನವೂ ಇರಬೇಕು. ಜನ, ಸರ್ಕಾರ, ಪಕ್ಷಗಳು ಒಬ್ಬರನ್ನೊಬ್ಬರು ದೂರಿಕೊಳ್ಳುವ ಬದಲು ಜನರನ್ನು ರಕ್ಷಿಸಲು ಒಮ್ಮತದಿಂದ ಕೆಲಸ ಮಾಡಬೇಕು. ಆಗ ಮಾತ್ರ ಜನ ಆರೋಗ್ಯದಿಂದ ಇರಲು ಸಾಧ್ಯ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *