ಬೆಂಗಳೂರು; ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಮುರುಳಿ ಮೋಹನ್ ಅವರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಇದೀಗ ಚಿಕಿತ್ಸೆಗಾಗಿ ಸಹಾಯ ಬೇಡಿದ್ದಾರೆ. ಮುರುಳಿ ಮೋಹನ್ ಅವರು ಉಪೇಂದ್ರ ಅವರಿಗೆ ಆತ್ಮೀಯರಾಗಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆ ಬೇಕಾಗಿದೆ. ಹೀಗಾಗಿ ಸಹಾಯ ಬೇಡಿದ್ದಾರೆ.
ಮುರುಳಿ ಮೋಹನ್, ನಿರ್ದೇಶನದ ಜೊತೆಗೆ ಸಂಭಾಷಣೆ, ಕತೆಗಾರ, ಗೀತ ರಚನೆಕಾರರಾಗಿ ಕೂಡ ಕೆಲಸ ಮಾಡಿದ್ದಾರೆ. ಈಗ ಅವರಿಗೆ ಮೂತ್ರಪಿಂಡ ವೈಫಲ್ಯದ ಸಮಸ್ಯೆಯಾಗಿದೆ. ಸಹಾಯಕ್ಕಾಗಿ ಬಹಿರಂಗ ಪತ್ರ ಬರೆದಿದ್ದಾರೆ. ‘ಎಸ್. ಮುರಳಿ ಎಂಬ ಹೆಸರಿನ ನಾನು ಮೇಲ್ಕಂಡ ವಿಳಾಸದಲ್ಲಿ ವಾಸಿಸುತ್ತಿದ್ದೇನೆ. ನಾನು ಕಳೆದ 36 ವರ್ಷಗಳಿಂದ ಕನ್ನಡ ಚಲನ ಚಿತ್ರರಂಗದಲ್ಲಿ ನಿರ್ದೇಶನ, ನಟನೆ, ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ 2018 ರಿಂದ ಆರೋಗ್ಯ ಸಮಸ್ಯೆ.
ಮೂತ್ರಪಿಂಡ ವೈಪಲ್ಯ ಕಂಡು ಬಂದು ನಾನು ವಾರಕ್ಕೆ 3 ದಿನಗಳು ಡಯಾಲಸಿಸ್ ಚಿಕಿತ್ಸೆ ಪಡೆಯುತ್ತಿದ್ದೇನೆ. ದಿನಾಂಕ 08.10.2020 ರಂದು ಮೂತ್ರ ಪಿಂಡಕ್ಕಾಗಿ ಅಂಗಾಂಗ ಕಸಿ ಅಧಿಕಾರಿ, ಜೀವಸಾರ್ಥಕತೆಯಲ್ಲಿ ನೊಂದಣಿ ಮಾಡಿದ್ದೇನೆ. ಈಗ ನನಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾದ ಸಮಯ ಬಂದಿದ್ದು, ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ತಿಳಿಸಿರುತ್ತಾರೆ. ಈ ಶಸ್ತ್ರ ಚಿಕಿತ್ಸೆಯ ವೆಚ್ಚ ಸುಮಾರು ರೂ.25,00,000/- (ಇಪ್ಪತ್ತೈದು ಲಕ್ಷ ರೂಪಾಯಿಗಳು) ಗಳ ಅವಶ್ಯಕತೆಯಿದ್ದು, ನಾನು ಈಗಾಗಲೇ ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ಇತರೆ ಚಿಕಿತ್ಸೆಗಳಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಪತ್ರ ಬರೆದಿದ್ದಾರೆ.



