ಗೆಲ್ಲಿಸಿದ್ರೆ ಮುಸ್ಲಿಂರು ತಿಲಕ ಇಡುವಂತೆ ಮಾಡ್ತೀನಿ : ಬಿಜೆಪಿ ಶಾಸಕ

ಲಕ್ನೋ: ಉತ್ತರಪ್ರದೇಶದಲ್ಲಿ ಚುನಾವಣಾ ಕಣ ಬಿಸಿ ಏರಿದೆ. ಪ್ರಚಾರದಲ್ಲಿ ತೊಡಗಿರುವ ಪಕ್ಷಗಳು ಜನರಿಗೆ ನಾನಾ ರೀತಿಯ ಆಮಿಷ ತೋರಿಸುತ್ತಿದ್ದಾರೆ. ಇದೀಗ ಬಿಜೆಪಿಯ ಶಾಸಕರೊಬ್ಬರು, ನನ್ನನ್ನು ಮತ್ತೆ ಶಾಸಕರನ್ನಾಗಿ ಮಾಡಿದ್ರೆ ಮುಸ್ಲಿಂರು ತಿಲಕ ಇಡುವಂತೆ ಮಾಡ್ತೀನಿ ಎಂದಿದ್ದಾರೆ.

ಪ್ರಚಾರದ ವೇಳೆ ಮಾತನಾಡಿರುವ ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್, ನಾನು ಹಿಂದೂಗಳ ಹೆಮ್ಮೆಗಾಗಿ ಏನು ಬೇಕಾದರೂ ತ್ಯಾಗ ಮಾಡುತ್ತೇನೆ. ಮುಸ್ಲಿಮರು ನನ್ನನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಇಂಥಹ ಸಂದರ್ಭದಲ್ಲಿ ನಾನು ಮೌನಿಯಾಗಿರಲ್ಲ. ನಾನು ಮತ್ತೆ ಶಾಸಕನಾದರೆ ಮುಸ್ಲಿಂರ ಟೋಪಿ ತೆಗೆಸುತ್ತೇನೆ ಎಂದಿದ್ದಾರೆ.

ಡೊಮರಿಯಾಗಂಜ್‌ನಲ್ಲಿ ʼಸಲಾಮ್‌ʼ ಇದೆಯೇ ಅಥವಾ ʼಜೈ ಶ್ರೀರಾಮ್‌ʼ ಇದೆಯೇ..? ಇದೇ ಮೊದಲ ಬಾರಿಗೆ ಡೊಮರಿಯಾಗಂಜ್ ನಲ್ಲಿ ಅತಿ ಹೆಚ್ಚು ಹಿಂದೂಗಳೇ ಸ್ಪರ್ಧೆ ನಡೆಸಿದ್ದಾರೆ. ಈ ಬಾರಿ ಗೆಲ್ಲಿಸಿದ್ರೆ ಅವರಿಗೂ ತಿಲಕ ಹಾಕಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *