ಜುಲೈ 20 ರಂದು ತರಾಸು ರಂಗಮಂದಿರದಲ್ಲಿ ಉನ್ಮುಖಿ ಕಾರ್ಯಕ್ರಮ : ಕು.ಕೃಪಾ ಜಿ.ರಮೇಶ್

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಜು.19) : ಜುಲೈ 20 ರ ಬುಧವಾರದಂದು ನಗರದ ತರಾಸು ರಂಗಮಂದಿರದಲ್ಲಿ ಉನ್ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಕು.ಕೃಪಾ ಜಿ.ರಮೇಶ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಚಿಕ್ಕವಳಾಗಿದ್ದಾಗ 8 ವರ್ಷದಿಂದ ಭರತನಾಟ್ಯವನ್ನು ಕಲಿತ್ತಿದ್ದೇ ತದ ನಂತರ ಪಿಯುಸಿಯವರೆಗೂ ಭರತನಾಟ್ಯವನ್ನು ಕಲಿತೆ. ತದ ನಂತರ ಬಿಟ್ಟೆ ನಂತರ ಸ್ವಲ್ಪ ದಿನಗಳ ನಂತರ ಮತ್ತೇ ಭರತನಾಟ್ಯವನ್ನು ಕಲಿತೆ, ನನ್ನ ಗುರುಗಳಾಗಿ ಮಾಲಿನಿ ಶೇಖರ್ ಮತ್ತು ಸರಸ್ವತಿ ಶ್ರೀಧರ್ ಇದ್ದರು.

ಇದುವರೆಗೂ ನಾನು ಗುಂಪಿನಲ್ಲಿ ಮಾತ್ರ ಭರತನಾಟ್ಯವನ್ನು ಮಾಡಿದ್ದೇ ಜು.20ರಂದು ನಡೆಯುವ ಕಾರ್ಯಕ್ರಮದಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಏಕ ವ್ಯಕ್ತಿಯ ಭರತನಾಟ್ಯವನ್ನು ಪ್ರದರ್ಶನ ಮಾಡುತ್ತೇನೆ ಎಂದರು.

ಬಿಇ ಸಿವಿಲ್ ಮಾಡಿಕೊಂಡಿದ್ದು, ಓದಿನ ಜೊತೆಗೆ ಇದನ್ನು ಸಹಾ ಕಲಿಯುತ್ತಿದ್ದೇನೆ, ಈಗ ಭರತನಾಟ್ಯದಲ್ಲಿ ಎಂಎಯನ್ನು ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದಲ್ಲಿ ಮಾಡುತ್ತೀದ್ದೆನೆ.

ಈ ಕಾರ್ಯಕ್ರಮದಲ್ಲಿ ಮೈಸೂರಿನ ನೃತ್ಯಗಿರಿ ಸಂಸ್ಥಾಪಕರಾದ ಡಾ.ಕೃಪಾ ಫಡ್ಕೆ, ದಾವಣಗೆರೆಯ ಭರತಾಂಜಲಿ ಸಂಸ್ಥಾಪಕರಾದ ಡಾ.ಮಂಗಳಾ ಶೇಖರ್ ಹಾಗೂ ಸಂಸ್ಕಾರ ಭಾರತೀ ಪ್ರಾಂತ ಪ್ರಧಾನ ಕಾರ್ಯದರ್ಶಿಯಾದ ಡಾ.ರಾಜೀವ ಲೋಚನ ಭಾಗವಹಿಸಲಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *