ಅನಾರೋಗ್ಯದಿಂದಾಗಿ ಉದಯವಾಣಿ ಸಂಸ್ಥಾಪಕ ಮೋಹನ್ ದಾಸ್ ಪೈ ನಿಧನ..!

1 Min Read

ಮಣಿಪಾಲ್, (ಜು.31): ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮೋಹನ್ ದಾಸ್ ಪೈ ಅವರು ಇಂದು ನಿಧನರಾಗಿದ್ದಾರೆ. 89 ವರ್ಷ ವಯಸ್ಸಾಗಿತ್ತು. ಮಣಿಪಾಲದ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಮೋಹನ್ ದಾಸ್ ಪೈ ಅವರು ಮಣಿಪಾಲದ ಪೈ ಕುಟುಂಬದ ಹಿರಿಯರಾಗಿದ್ದರು. ಉದಯವಾಣಿ ಎಂಬ ದೊಡ್ಡ ಸಂಸ್ಥೆಯನ್ನು ಕಟ್ಟಿದವರು. ಅಷ್ಟೇ ಅಲ್ಲ ದೊಡ್ಡ ದೊಡ್ಡ ಸಂಸ್ಥೆಗಳನ್ನು ತೆರೆಮರೆಯಲ್ಲಿದ್ದುಕೊಂಡೆ ಮುನ್ನಡೆಸುತ್ತಿದ್ದರು. ಇಂದು ನಿಧನರಾಗಿದ್ದು, ತಮ್ಮ, ತಂಗಿ ಮತ್ತು ಸಹೋದರನನ್ನು ಅಗಲಿದ್ದಾರೆ.

ನಾಳೆ ಎಂಜಿಎಂ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಾ. ಟಿಎಂಎ ಫೌಂಡೇಶನ್ ವಿದ್ಯಾಸಂಸ್ಥೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಮೋಹನ್ ದಾಸ್ ಪೈ ಅವರು ಡಾ ಟಿಎಂಎ ಪೈ ಫೌಂಡೇಶನ್ ಮತ್ತು ಎಂಜಿಎಂ ಕಾಲೇಜು ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇಡೀ ಕುಟುಂಬ, ಸಂಸ್ಥೆಯ ಸಿಬ್ಬಂದಿಗಳು ದುಃಖ ತಪ್ತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *