ರಾಮನಗರದಲ್ಲಿ ಬಾಣಂತಿ ಡಿಸ್ಚಾರ್ಜ್ ಗೆ ಲಂಚ ಕೇಳಿದ ಇಬ್ಬರು ವೈದ್ಯರಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ..?

suddionenews
1 Min Read

 

ರಾಮನಗರ: ವೈದ್ಯ ನಾರಯಣೋ ಹರಿನು ಅಲ್ಲ, ಮತ್ತೊಂದು ಅಲ್ಲ. ಈಗ ಎಲ್ಲಾ ಕ್ಷೇತ್ರದಲ್ಲೂ ಲಂಚಾದೇವಿ ಕುಣಿಯುತ್ತಿದ್ದಾಳೆ. ಎಲ್ಲಿಯೂ ಲಂಚವಿಲ್ಲದೆ ಕೆಲಸವೇ ಆಗುವುದಿಲ್ಲ. ಅದು ಕಚೇರಿಯಾದರೂ ಸರಿ ಆಸ್ಪತ್ರೆಯಾದರೂ ಸರಿ. ಲಂಚವಿಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಪ್ರಾಣಕ್ಕಿಂತ ಈಗ ಆಸ್ಪತ್ರೆಯಲ್ಲಿ ಹಣವಷ್ಟೇ ಮಾತನಾಡುತ್ತೆ. ಅದು ಈಗಾಗಲೇ ಸಾಕಷ್ಟು ಬಾರಿ ಪ್ರೂವ್ ಆಗಿದೆ.

ಇದೀಗ ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನು ಯಂಗ್ ಆಗಿರುವಂತ, ಮಾದರಿಯಾಗಬೇಕಿರುವಂತ ಇಬ್ಬರು ವೈದ್ಯೆಯರು ಕೂಡ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದು ಬಾಣಂತಿಯನ್ನು ಡಿಸ್ಚಾರ್ಜ್ ಮಾಡಬೇಕು ಎಂದರೆ ಹಣ ಕೊಟ್ಟರೆ ಮಾತ್ರ ಡಿಸ್ಚಾರ್ಜ್ ಅಂತೆ. ಇದು ಒಂದು ದಿನದ ಕಥೆಯಲ್ಲ ಬಿಡದಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನನಿತ್ಯ ಇದೇ ಕರ್ಮ ನೋಡಿ ರೋಗಿಗಳ ಮನೆಯವರು ಸುಸ್ತೆದ್ದು ಹೋಗಿದ್ದಾರೆ.

ಇಲ್ಲಿನ ಡಾ ಶಶಿಕಲಾ ಹಾಗೂ ಡಾ ಐಶ್ವರ್ಯ, ರೋಗಿಗಳ ಪೋಷಕರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರೋಗಿ ಕಡೆಯವರೊಬ್ಬರು ವೈದ್ಯರಿಗೆ ಎರಡು ಸಾವಿರ ಕೊಡಲು ಹೋದಾಗ ಅದನ್ನು ನಿರಾಕರಿಸಿ, ಮೇಲಿನ ವೈದ್ಯರಿಗೆ ಎರಡು ಸಾವಿರ, ಮತ್ತೊಬ್ಬರಿಗೂ ಎರಡು ಸಾವಿರ ನೀಡಬೇಕು ಎಂದಿದ್ದಾರೆ. ಅಲ್ಲಿಯೇ ಇದ್ದ ಐಶ್ವರ್ಯ, ನಿಮ್ಮೊಬ್ಬರ ಬಳಿ ಎರಡು ಸಾವಿರ ತೆಗೆದುಕೊಂಡರೆ ವಾರ್ಡ್ ನಲ್ಲಿ ಇರುವವರೆಲ್ಲಾ ಅಷ್ಟೇ ಕೊಡುತ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *