ಬಳ್ಳಾರಿ: ಬ್ಯಾನರ್ ಗಲಾಟೆ ಕೇಸ್ ಗೆ ಸಂಬಂಧಿಸಿದಂತೆ ದಿನೇದಿನೇ ಬಿಗ್ ಅಪ್ಡೇಟ್ ಆಗ್ತಾ ಇದೆ. ಹೊಸದಾಗಿ ಬಂದಿರುವ ಎಸ್ಪಿ ಸುಮನ್ ಡಿ ಪನ್ನೇಕರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮದಿಂದಾನೂ ತನಿಖೆಯನ್ನ ನಡೆಸುತ್ತಿದ್ದಾರೆ. ಸದ್ಯ ಸಿಸಿಟಿವಿ ನೋಡಿದಾಗ ಆ ಘಟನೆಯ ಬಗ್ಗೆ ಶಾಕಿಂಗ್ ವಿಚಾರವೊಂದು ಜೊರ ಬಂದಿದೆ.
ಅಂದು ಬ್ಯಾನರ್ ಕಟ್ಟುವುದಕ್ಕೆ ಹೋದಾಗ ಘಟನೆ ನಡೆದಿರುವುದು. ಆದರೆ ಆ ಗುಂಪಲ್ಲಿ ಸ್ಥಳೀಯ ಅಂದ್ರೆ ಬಳ್ಳಾರಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಇರಲೇ ಇಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಆಂಧ್ರ ಹಾಗೂ ತೆಲಂಗಾಣ ಭಾಗದಿಂದ ಜನ ಬಂದಿದ್ದಾರೆ ಎಂಬ ಅನುಮಾನ ವಿಡಿಯೋ ಪರಿಶೀಲನೆ ನಡೆಸಿದಾಗ ಅನುಮಾನ ವ್ಯಕ್ತವಾಗಿದೆ. ವಿಡಿಯೋಗಳನ್ನ ತೋರಿಸಿ ಸ್ಥಳೀಯರ ಬಳಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ವಿಡಿಯೋದಲ್ಲಿ ಇರೋರು ಯಾರಂತ ಗೊತ್ತಿಲ್ಲ ಅಂತ ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರಂತೆ.
ಈ ಹಿನ್ನೆಲೆ ಒಂದು ಸ್ಪೆಷಲ್ ಟೀಂ ಆಂಧ್ರ ಹಾಗೂ ತೆಲಂಗಾಣದಲ್ಲೂ ಕಾರ್ಯಾಚರಣೆಗೆ ಇಳಿದಿದೆ. ಪೊಲೀಸರು 15 ದಿನಗಳ ಟವರ್ ಲೊಕೇಷನ್ ಟ್ರ್ಯಾಕ್ ಮಾಡಿದ್ದಾರೆ. ಇದರೊಂದಿಗೆ ಗಲಾಟೆಯಲ್ಲಿ ಬಳಕೆಯಾದ ದೊಣ್ಣೆಗಳ ರಾಶಿ, ಗನ್ ಬಳಕೆ ರೀತಿ, ಕಲ್ಲು, ಖಾರದ ಪುಡಿ ಬಳಕೆ ಎಲ್ಲವೂ ಒಂದೇ ಮಾದರಿಯಲ್ಲಿದ್ದು ಇವೆಲ್ಲವನ್ನೂ ದಿಢೀರ್ ಅಂತ ಸಂಗ್ರಹ ಮಾಡಿದ್ರಾ? ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ ಎಂಬುದರ ಟೆಕ್ನಿಕಲ್ ಅನಾಲಿಸಿಸ್ಗೆ ಅಂತಲೇ ಮೂರು ವಿಶೇಷ ತಂಡ ರಚನೆ ಮಾಡಲಾಗಿದೆ. ಗಲಭೆಯ ವಿಚಾರಣೆಯನ್ನ ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದರ ನಡುವೆ ಜನಾರ್ದನ ರೆಡ್ಡಿ ಅವರು, ಭರತ್ ರೆಡ್ಡಿ ಬಂಧನಕ್ಕೆ ಆಗ್ರಹಿಸಿದ್ದಾರೆ.

