Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೂಡಾ ಹಗರಣವನ್ನು ಗಮನಕ್ಕೆ ತಂದಿದ್ದ ಡಿಸಿ ಸೇರಿದಂತೆ 21 ಐಎಎಸ್ ಅಧಿಕಾರಿಗಳ ವರ್ಗಾವಣೆ..!

Facebook
Twitter
Telegram
WhatsApp

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹಗರಣ ಸದ್ಯ ರಾಜ್ಯದಲ್ಲಿಯೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಹಾಗೂ ವಿಪಕ್ಷ ನಾಯಕರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಮೂಡಾ ಹಗರದ ಬಗ್ಗೆ ಒಂದು ವರ್ಷದ ಹಿಂದೆಯೇ ಸರ್ಕಾರದ ಗಮನಕ್ಕೆ ತಂದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಡಿಸಿ ಕೆ.ವಿ.ರಾಜೇಂದ್ರ ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಮೈಸೂರು ಡಿಸಿಯಾಗಿದ್ದ ಕೆ.ವಿ.ರಾಜೇಂದ್ರ ಅವರು ಬೆಂಗಳೂರಿಗೆ ಬಂದಿದ್ದು, ಪ್ರವಾಸೋದ್ಯಮ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಮೈಸೂರಿಗೆ ಹೊಸ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

ಇನ್ನುಳಿದಂತೆ ವರ್ಗಾವಣೆಯಾದ ಅಧಿಕಾರಿಗಳ ಲೀಸ್ಟ್ ಇಲ್ಲಿದೆ:

* ವರ್ಗಾವಣೆಯಾದ ಅಧಿಕಾರಿಗಳು ಮತ್ತು ನಿಯುಕ್ತಗೊಂಡ ಇಲಾಖೆ
* ಡಾ ರಾಮ್ ಪ್ರಸಾತ್ ಮನೋಹರ್ ವಿ.: ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.

* ನಿತೇಶ್ ಪಾಟೀಲ್: ನಿರ್ದೇಶಕರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಇಲಾಖೆ, ಬೆಂಗಳೂರು.

* ಡಾ. ಅರುಂಧತಿ ಚಂದ್ರಶೇಖರ್: ಆಯುಕ್ತೆ ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು

* ಜ್ಯೋತಿ ಕೆ: ಆಯುಕ್ತೆ ಜವಳಿ ಅಭಿವೃದ್ಧಿ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕರು, ಬೆಂಗಳೂರು.

*
ಶ್ರೀಧರ ಸಿಎನ್: ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು.

* ರಾಮ್ ಪ್ರಸಾತ್ ಮನೋಹರ್: ವ್ಯವಸ್ಥಾಪಕರು ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು.
* ಚಂದ್ರಶೇಖರ ನಾಯಕ ಎಲ್: ಆಯುಕ್ತರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ (ಜಾರಿ), ಬೆಂಗಳೂರು.

* ವಿಜಯಮಹಾಂತೇಶ ಬಿ ದಾನಮ್ಮನವರ್: ಉಪ ಆಯುಕ್ತ, ಹಾವೇರಿ ಜಿಲ್ಲೆ

* ಗೋವಿಂದ ರೆಡ್ಡಿ: ಉಪ ಆಯುಕ್ತ, ಬೀದರ್

* ರಘುನಂದನ್ ಮೂರ್ತಿ: ಆಯುಕ್ತರು ಖಜಾನೆಗಳು ಮತ್ತು ಲೆಕ್ಕಪತ್ರ ಇಲಾಖೆ, ಬೆಂಗಳೂರು.

*ಡಾ. ಗಂಗಾಧರಸ್ವಾಮಿ ಜಿ ಎಂ: ಉಪ ಆಯುಕ್ತ , ದಾವಣಗೆರೆ ಜಿಲ್ಲೆ

* ನಿತೀಶ್ ಕೆ: ಉಪ ಆಯುಕ್ತ, ರಾಯಚೂರು ಜಿಲ್ಲೆ

* ಮೊಹಮ್ಮದ್ ರೋಶನ್: ಉಪ ಆಯುಕ್ತ, ಬೆಳಗಾವಿ ಜಿಲ್ಲೆ

* ಶಿಲ್ಪಾ ಶರ್ಮಾ: ಉಪ ಆಯುಕ್ತೆ, ಬೀದರ್ ಜಿಲ್ಲೆ

* ಡಾ ದಿಲೀಶ್ ಸಸಿ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಟಿಜನ್ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ (EDCS), ಸಿಬ್ಬಂದಿ ಇಲಾಖೆ ಮತ್ತು ಆಡಳಿತಾತ್ಮಕ ಸುಧಾರಣೆಗಳು (ಇ-ಆಡಳಿತ) ಕೇಂದ್ರ, ಬೆಂಗಳೂರು.

* ಲೋಖಂಡೆ ಸ್ನೇಹಲ್ ಸುಧಾಕರ್: ನಿರ್ದೇಶಕ, ಕರ್ನಾಟಕ ವಿದ್ಯುತ್ ವ್ಯವಸ್ಥಾಪಕ ಕಾರ್ಖಾನೆ ಲಿಮಿಟೆಡ್

* ಶ್ರೀರೂಪ: ಆಯುಕ್ತೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು, ನಿರ್ದೇಶರು ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಸಂಶೋಧನೆ ಅಭಿವೃದ್ಧಿ ಸಂಸ್ಥೆ

* ಗಿಟ್ಟೆ ಮಾಧವ್ ವಿಠ್ಠಲ್ ರಾವ್: ಪ್ರಧಾನ ವ್ಯವಸ್ಥಾಪಕರು, (ಪುನರ್ವಸತಿ ಮತ್ತು ಪುನರ್ವಸತಿ), ಬಾಗಲಕೋಟೆ.

* ಹೇಮಂತ್ ಎನ್: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಶಿವಮೊಗ್ಗ ನೊಂಗ್ಜೈ ಮೊಹಮ್ಮದ್ ಅಲಿ

* ಅಕ್ರಮ್ ಶಾ: ಮುಖ್ಯ ಕಾರ್ಯನಿರ್ವಾಹಕ, ವಿಜಯನಗರ ಜಿಲ್ಲೆ ಜಿಲ್ಲಾ ಪಂಚಾಯತ್ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Clove for Diabetes : ಲವಂಗದಿಂದ ಮಧುಮೇಹವನ್ನು ಕಡಿಮೆ ಮಾಡುವುದು ಹೇಗೆ ?

ಸುದ್ದಿಒನ್ : ವಿಶ್ವಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಒಮ್ಮೆ ಈ ಖಾಯಿಲೆ ಬಂದರೆ ಜೀವನ ಪರ್ಯಂತ ಕಾಡುತ್ತದೆ. ಆದ್ದರಿಂದ ಮುಂಚಿತವಾಗಿ ಕಾಳಜಿ ವಹಿಸಿದರೆ, ಆರೋಗ್ಯಕರ ಮತ್ತು ಸುಂದರವಾಗಿರಬಹುದು. ನಾವು ಮನೆಯಲ್ಲಿ ನಿತ್ಯ ಬಳಸುವ

ಈ ಐದು ರಾಶಿಯವರು ಹೊಸ ಉದ್ಯೋಗದ ಸಂದರ್ಶನದ ಕಾಲ್(ಕರೆ ) ಬರಲಿದೆ,

ಈ ರಾಶಿಯವರ ರೋಮ್ಯಾಂಟಿಕ್ ಜೀವನ ಉತ್ತಮ, ಈ ಐದು ರಾಶಿಯವರು ಹೊಸ ಉದ್ಯೋಗದ ಸಂದರ್ಶನದ ಕಾಲ್(ಕರೆ ) ಬರಲಿದೆ, ಸಿಂಹ ರಾಶಿ ಪ್ರೇಮಿಯ ಮನಸ್ಸು ಚಂಚಲ. ಸೋಮವಾರ ರಾಶಿ ಭವಿಷ್ಯ -ಜುಲೈ-8,2024 ಸೂರ್ಯೋದಯ: 05:51,

ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷದ ಸರ್ಕಾರ ಸಿದ್ಧ :ಶಾಸಕ ಟಿ ರಘುಮೂರ್ತಿ 

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಜುಲೈ. 07  ಮಾಧ್ಯಮಗಳು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ನಿಜವಾದ ಅರ್ಥ

error: Content is protected !!