Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

Facebook
Twitter
Telegram
WhatsApp

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿನೇ ದಿನೇ‌ ಮಿತಿಮೀರುತ್ತಿದೆ. ಮೈಸೂರಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಹವಮಾನ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಸಲಹೆ ನೀಡಿದೆ.

ಮೈಸೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದೆ. ಮೇ 5ರವರೆಗೂ ಮೈಸೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಖ ಜೋರಾದ ಕಾರಣ ಜನರಿಗೆ ಅಲರ್ಟ್ ಮಾಡಲು ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಯಸ್ಸದಾವರು, ಮಕ್ಕಳಿಗೇನೆ ಈ ವಾತಾವರಣ ಡೇಂಜರಸ್ ಆಗಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿಲಿನ ತಾಪಕ್ಕೆ ವಯಸ್ಸಾದವರು ಸಾವನ್ನಪ್ಪಿರುವ ಘಟನೆಯೂ ನಡೆದಿದೆ.

ಇನ್ನು ಮೈಸೂರಿನಲ್ಲಿ ಕಾರ್ಮಿಕರಿಗೂ ಸೂಚನೆಯನ್ನು ನೀಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ತನಕ ಬಿಸಿಲಿನಲ್ಲಿ ನಿಂತು ಕೆಲಸ ಮಾಡಬೇಡಿ. ಇದರಿಂದ ಆಯಾಸವಾಗಿ ತಲೆ ಸುತ್ತು ಬರುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ವಯಸ್ಸಾದವರು ಮತ್ತು ಮಕ್ಕಳು ಆದಷ್ಟು‌ಮನೆಯಲ್ಲಿಯೇ ಇರುವುದಕ್ಕೆ ಪ್ರಯತ್ನ ಪಡಿ. ಹಿರಗೆ ಬಂದರೆ ಬಿಸಿಲಿನ ಬೇಗೆಗೆ ಆಯಾಸವಾಗಬಹುದು, ಅನಾರೋಗ್ಯಕ್ಕೂ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಅವಮಾನ ಇಲಾಖೆ ನೀಡಿದೆ.

ಈ ಬಿಸಿಲಿನಿಂದಾಗಿ ಎಷ್ಟೋ ಜನರಿಗೆ ಅನಾರೋಗ್ಯ ಕಾಡುತ್ತಿದೆ. ಅತಿಸಾರ ಬೇಧಿ, ವಾಂತಿ, ಆಯಾಸವಾಗುವುದು ಸೇರಿದಂತೆ ಹಲವು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಡಿಹೈಡ್ರೇಷನ್ ಜಾಸ್ತಿಯಾಗುತ್ತಿದ್ದು, ಸಾಧ್ಯವಾದಷ್ಟು ನೀರು ಕುಡಿಯುವುದು ಉತ್ತಮವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾರುಕಟ್ಟೆಗೆ ಬಂತು ನ್ಯಾನೋ ಎಲೆಕ್ಟ್ರಾನಿಕ್ ಕಾರು : ಏನಿಲ್ಲಾ ವಿಶೇಷತೆ ಇದೆ ಗೊತ್ತಾ..?

ಎಲೆಕ್ಟ್ರಾನಿಕ್ ಬೈಕ್, ಕಾರುಗಳಿಗೆ ಭಾರತದಲ್ಲಿ ಸಿಕ್ಕಪಟ್ಟೆ ಡಿಮ್ಯಾಂಡ್ ಇದೆ. ಪೆಟ್ರೋಲ್ ದರ ಏರಿಕೆಯಾದ ಬೆನ್ನಲ್ಲೇ ಜನ ಎಲೆಕ್ಟ್ರಾನಿಕ್ ಮೊರೆ ಹೋಗುತ್ತಿದ್ದಾರೆ‌.‌ಇದೇ ಕಾರಣಕ್ಕಾಗಿಯೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ. ಇದೀಗ ಭಾರತಕ್ಕೆ ನ್ಯಾನೋ ಎಲೆಕ್ಟ್ರಾನಿಕ್ ಕಾರು

ಬರ, ಬೆಳೆ ನಾಶದಿಂದ ಕಂಗೆಟ್ಟ ರೈತರ ಕಣ್ಣಲ್ಲಿ ನೀರು ತರಿಸಬಾರದು : ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೂ, ಕೆಲವು ಬ್ಯಾಂಕ್ ಗಳು ಅದನ್ನ ಸಾಲದ ಮೊತ್ತಕ್ಕೆ ವಜಾ ಮಾಡಿಕೊಳ್ಳುತ್ತಿವೆ. ಯಾದಗಿರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಬೆಳವಣಿಗೆ ರೈತರಿಗೂ ಆತಂಕ ತಂದೊಡ್ಡಿದೆ. ಬೆಳೆನಾಶದ

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಬಿಜೆಪಿಯ ಪ್ರೀತಂಗೌಡ ಆಪ್ತರ‌ ಮನೆಯಲ್ಲಿ 10 ಪೆನ್ ಡ್ರೈವ್ ಪತ್ತೆ..!

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯ ಹಾಸನದಲ್ಲಿ ತಪಾಸಣೆ ನಡೆಸುತ್ತಿದ್ದು, ಪ್ರೀತಂಗೌಡ ಆಪ್ತರ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಹತ್ತು ಪೆನ್ ಡ್ರೈವ್

error: Content is protected !!