Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾರಿಗೆ ನೌಕರರ ಹೋರಾಟ ಮತ್ತೆ ಶುರುವಾಗುತ್ತಾ..? ಕೋಡಿಹಳ್ಳಿ ಏನಂದ್ರು..?

Facebook
Twitter
Telegram
WhatsApp

ಬೆಂಗಳೂರು: ನಾನು ಬದುಕಿರುವಷ್ಟು ದಿನ ರೈತರ ಪರ ಹೋರಾಟ ಮಾಡುತ್ತೇನೆ. ಆದರೆ ರಾಜಕಾರಣ ಅತ್ಯಂತ ಹೀನಾಯ ಸ್ಥಿತಿ ತಲುಪಿದ ಮೇಲೆ, ಒಬ್ಬ ನಾಗರಿಕನಾಗಿ ನೋಡಿಕೊಂಡು ಸುಮ್ಮನೆ ಇರಲಾಗದು ಎಂಬ ಕಾರಣಕ್ಕೆ ಕಳೆದ ತಿಂಗಳು ಆಮ್ ಆದ್ಮಿ ಪಕ್ಷದ ಜೊತೆಗೆ ಘೋಷಣೆ ಮಾಡಿದ್ದೇನೆ. ಅದು ರೈತರ ಮುಖವಾಣಿಯಂತೆ ಇರಲಿದೆ. ಈ ಮಧ್ಯೆ ರಾಮುಲು ಮತ್ತು ಸಿಎಂಗೆ ವಿನಂತಿ ಮಾಡುತ್ತೇನೆ. ನಾಲ್ಕು ವಾರಗಳಲ್ಲಿ ನ್ಯಾಯ ಸಿಗುತ್ತೆ ಎಂದಿದ್ದಿರಿ. ಈಗ ನಾಲ್ಕು ವಾರ ನಾಲ್ಕು ತಿಂಗಳಾಗಿದೆ. ಅದಕ್ಕೆ ನಾವೂ ನಾಲ್ಕು ವಾರದ ಗಡುವು ನೀಡುತ್ತಿದ್ದೇವೆ. ಆಮೇಲೆ ಮುಂದಿನ ಹೋರಾಟವನ್ನು ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

ನಾಲ್ಕು ವಾರಗಳಲ್ಲಿ ನೌಕರರ ಸಮಸ್ಯೆ ಬಗೆಹರಿಸುತ್ತೀವಿ ಅಂತ ಸಚಿವ ಶ್ರೀರಾಮುಲು ಅವರು ಆದೇಶ ಹೊರಡಿಸಿದ್ದರು. ಆದರೆ ಆ ನಾಲ್ಕು ವಾರಗಳು ಹೋಗಿ ಈಗ ನಾಲ್ಕು ತಿಂಗಳು ಕಳೆಯಿತು. ಆದರೆ ಯಾವುದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಮತ್ತೆ ಸಾರಿಗೆ ನೌಕರರಿಂದ ಪ್ರತಿಭಟನೆ ಮಾಡುವ ಸೂಚನೆ ನೀಡಿದ್ದಾರೆ.

ದಂಡನೆ ಮಾಡುವಂತದ್ದನ್ನು ತ್ವರಿತವಾಗಿ ನಿಲ್ಲಿಸಬೇಕು. ಸಾರಿಗೆ ನೌಕರರ ನಿಗಮಗಳನ್ನು ಒಳಗೊಂಡಂತೆ ನೇಮಕಾತಿಗೆ ಸಂಬಂಧಿಸಿದಂತೆ ತಕ್ಷಣವೇ ಆದೇಶ ಹೊರಡಿಸಬೇಕು. ವರ್ಗಾವಣೆ ಇತ್ಯಾದಿ ದೋಷಗಳು ಅಂತ ಹೇಳಿ ಇಟ್ಟುಕೊಂಡಿರುವ ಪೆಂಡಿಂಗ್ ಅನ್ನು ಕ್ಲಿಯರ್ ಮಾಡಬೇಕು. ನನ್ನನ್ನು ಒಳಗೊಂಡಂತೆ ಸಾಕಷ್ಟು ಕ್ರಿಮಿನಲ್ ಕೇಸ್ ಗಳನ್ನು ಬುಕ್ ಮಾಡಿದ್ದೀರಿ. ನಾನು ಮತ್ತು ಸಾರಿಗೆ ನೌಕರರು ಮಾಡಿದ ಅಪರಾಧಗಳೇನು..? ಸತ್ಯಾಗ್ರಹ ಮಾಡಿದ್ದು ತಪ್ಪಾ, ಅರೆ ಹೊಟ್ಟೆ ಮಾಡುತ್ತಿದ್ದೀರಿ ಎಂಬುದು ತಪ್ಪಾ..?ಕೇಳಿದ್ದು ತಪ್ಪಾ..? ನಾವೂ ಕಳಕಳಿಯಿಂದ ಹೇಳುತ್ತಿದ್ದೇವೆ. ಎಲ್ಲಾ ಕೇಸ್ ಗಳು ವಿತ್ ಡ್ರಾ ಆಗಬೇಕು, ನೌಕರರು ಕೆಲಸಕ್ಕೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೂವಿನ ಹಡಗಲಿ | ಬೂದನೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ವೀ­ರಭದ್ರೇಶ್ವರ ಜಾತ್ರೆ

ಸುದ್ದಿಒನ್, ವಿಜಯನಗರ, ಹೂವಿನ ಹಡಗಲಿ, ಮೇ. 09  : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಾಳೆಯಿಂದ ಮೇ.17ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಅಬ್ಬರ..!

ಕಳೆದ ಮೂರ್ನಾಲ್ಕು ದಿನದಿಂದ ವರುಣರಾಯನ ದರ್ಶನವಾಗುತ್ತಿದೆ. ಆದರೂ ಕೆಲವೊಂದು ಕಡೆ ಬಿಸಿ ಗಾಳಿಯ ಅನುಭವ ಮಾತ್ರ ಕಡಿಮೆಯಾಗಿಲ್ಲ. ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು, ಕೆಲಸಕ್ಕೆ

ಚಿತ್ರದುರ್ಗ | ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ : 100 ಕ್ಕೆ 100 ಫಲಿತಾಂಶ ಪಡೆದ 13 ಶಾಲೆಗಳು

ಸುದ್ದಿಒನ್, ಚಿತ್ರದುರ್ಗ, ಮೇ. 09 :   ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ

error: Content is protected !!