Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕವಾಡಿಗರಹಟ್ಟಿಯಲ್ಲಿ ಮೂವರ ಸಾವಾಗಿದೆ, ಸುಮಾರು 80 ಮಂದಿ ಅಸ್ವಸ್ಥರಾಗಿದ್ದಾರೆ  ಈವರೆಗೂ ಶಾಸಕರು ಪತ್ತೆಯಿಲ್ಲ : ಕೆ.ಎಸ್. ನವೀನ್ ಆಕ್ರೋಶ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಆ.01) : ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಈವರೆಗೂ ಮೂವರು ಸಾವನ್ನಪ್ಪಿದರೂ ಸ್ಥಳೀಯ ಶಾಸಕರು ಬಾರದೇ ಇರುವುದು ತೀವ್ರ ಬೇಸರ ತರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕವಾಡಿಗರಹಟ್ಟಿಗೆ ಭೇಟಿ ನೀಡಿ, ನೊಂದ ಕುಟುಂಬದವರಿಗೆ ವೈಯಕ್ತಿಕ ಪರಿಹಾರ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.

ಚುನಾಯಿತ ಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅವರ ಸಂಕಷ್ಟದ ಸಮಯದಲ್ಲಿ ಅವರ ಜೊತೆಯಲ್ಲಿ ನಿಲ್ಲಬೇಕು.
ಎಷ್ಟೇ ಒತ್ತಡದಲ್ಲಿದ್ದರೂ ಇಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೇನು ಅಪಘಾತದ ಸಾವಲ್ಲ, ಸಣ್ಣ ವಿಷಯವಲ್ಲ, ಸುಮಾರು70-80 ಜನರು ಆ್ವಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕವಾಡಿಗರಹಟ್ಟಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿದೆ. ನಗರಸಭೆಯ ವಾರ್ಡ್ ಇದಾಗಿದ್ದು, ಇಂತಹ ಘಟನೆಗಳು ನಡೆದಾಗ ಸ್ಥಳಿಯ ಶಾಸಕರಾದವರು ಸಂಕಷ್ಟದಲ್ಲಿ ಇರುವ ಜನರ ನೆರವಿಗೆ ಧಾವಿಸಬೇಕು. ಪರಿಸ್ಥಿತಿ ನಿಭಾಯಿಸಬೇಕು, ನೊಂದವರಿಗೆ ಸಂತೈಸುವ ಕೆಲಸ ಮಾಡಬೇಕು.

ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು ಜನರು ವಾಂತಿ ಭೇದಿ ಬಾಧೆಯಿಂದ ನರಳುತ್ತಿದ್ದಾರೆ.ವೈದರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಮಕ್ಕಳಿಗೆ ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಚುನಾಯಿತ ಪ್ರತಿನಿಧಿಗಳು ಪರಿಸ್ಥಿತಿ ನಿಭಾಯಿಸಬೇಕು. ಕೇವಲ ಚುನಾವಣೆಯಲ್ಲಿ ಮತ ಪಡೆದು ಗೆದ್ದು ಹೋಗುವುದಲ್ಲ.ಜನರು ಕಷ್ಟದಲ್ಲಿ ಇದ್ದಾಗ ಅವರ ಪರವಾಗಿ ನಿಲ್ಲುವುದು ಚುನಾಯಿತ ಪ್ರತಿನಿಧಿಗಳು ಮೊದಲ ಕರ್ತವ್ಯ. ವಿಧಾನಸೌಧಕ್ಕೆ ಹೋಗುವುದು, ಮೀಟಿಂಗ್ ಗೆ ಹೋಗುವುದಲ್ಲ. ಕಷ್ಟದಲ್ಲಿರುವ ಜನರ ಮಧ್ಯೆ ನಿಲ್ಲಬೇಕು ಇದು ಯಾವುದೇ ಜನಪ್ರನಿಧಿಯ ಮೊದಲ ಆದ್ಯತೆ ಎಂದು ಹೇಳಿದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ : ಶುಕ್ರವಾರ ರಾತ್ರಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ? ಇಲ್ಲಿದೆ ಜಿಲ್ಲೆಯ ಮಳೆ ವರದಿ…!

  ಚಿತ್ರದುರ್ಗ. ಅ.05 :  ಶುಕ್ರವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 29 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 46.6 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 13 ಹಿರಿಯೂರು ತಾಲ್ಲೂಕು

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಎಲ್ಲರ ಬದುಕಿಗೆ ದಾರಿ ದೀಪ : ವೀರೇಶಾನಂದ ಸರಸ್ವತೀ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ, ಆ. 05 : ಸ್ವಾಮಿ ವಿವೇಕಾನಂದರು ತಮ್ಮ ಜೀವಾತಾವಧಿಯಲ್ಲಿ ಹಲವಾರು ಜನರಿಗೆ ಉತ್ತಮವಾದ ಮಾರ್ಗದರ್ಶನ ನೀಡುವುದರ ಮೂಲಕ

ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ : ಭಾರತಿ ಬಣಕಾರ್

  ವರದಿ ಮತ್ತು ಫೋಟೋ ಕೃಪೆ, ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಜಯ ಕರ್ನಾಟಕ ಜನಪರ ವೇದಿಕೆಯ ನಾಲ್ಕನೆ ವಾರ್ಷಿಕೋತ್ಸವದ ಅಂಗವಾಗಿ ಸ್ಟೇಡಿಯಂ ಸಮೀಪವಿರುವ

error: Content is protected !!