Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

PU ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ : ಪರೀಕ್ಷೆ ಅವಧಿ 15 ನಿಮಿಷ ಇಳಿಕೆ.. 20 ಅಂಕವೂ ಕಡಿಮೆ..!

Facebook
Twitter
Telegram
WhatsApp

ಬೆಂಗಳೂರು: ಕೆಲವೊಂದು ಪರೀಕ್ಷೆಗಳು ಮಕ್ಕಳ ಭವಿಷ್ಯಕ್ಕೆ ಬಹಳ ಮುಖ್ಯವಾಗುತ್ತವೆ. ಅದರಲ್ಲೂ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಗಳು ತುಂಬಾನೇ ಮುಖ್ಯವಾಗಿರುತ್ತವೆ. 100 ಅಂಕಗಳಿಗೆ 3 ಗಂಟೆ ಪರೀಕ್ಷೆ ನಡೆಸಲಾಗುತ್ತದೆ. ಇಡೀ ವರ್ಷ ಓದಿರುವುದನ್ನು 3 ಗಂಟೆಗಳಲ್ಲಿ ಬರೆಯಬೇಕು. ಎಷ್ಟೋ ಮಕ್ಕಳಿಗೆ ಈ ಸಮಯವೇ ಸಾಕಾಗುವುದಿಲ್ಲ. ಆದರೆ ಈಗ ಆ ಸಮಯವನ್ನು ಕೂಡ ಇಳಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಹೊಸ ನಿಯಮ ಜಾರಿಗೆ ತಂದಿದೆ.

ಇಷ್ಟು ವರ್ಷ 3 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ಮುಂದೆ ಅದರಲ್ಲಿ 15 ನಿಮಿಷವನ್ನು ಇಳಿಸಲಾಗಿದೆ. ಅಂದರೆ 2 ಗಂಟೆ 45 ನಿಮಿಷಗಳಿಗೆ ಪರೀಕ್ಷೆಯ ಕೊನೆಯ ಬೆಲ್ ಹೊಡೆಯಲಿದೆ. ಅಷ್ಟರ ಒಳಗೆ ಮಕ್ಕಳು ಪರೀಕ್ಷೆಯನ್ನು ಬರೆದು ಮುಗಿಸಿರಬೇಕು. ಹಾಗಂತ ಅಂಕಗಳು ನೂರಕ್ಕೆ ಸೀಮಿತವಾಗಿಲ್ಲ. ಅಂಕದ ವಿಚಾರದಲ್ಲೂ ಇಳಿಕೆ ಮಾಡಲಾಗಿದೆ. 100 ಅಂಕಕ್ಕೆ‌ನಡೆಯಬೇಕಿದ್ದ ಪರೀಕ್ಷೆ ಇನ್ಮುಂದೆ 80 ಅಂಕಕ್ಕೆ ನಡೆಯಲಿದೆ. ಅಂದರೆ 20 ಅಂಕವನ್ನು ಶಿಕ್ಷಣ ಇಲಾಖೆ ಇಳಿಸಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷೆಯ ಅವಧಿಯನ್ನು ಇಳಿಸಿದ್ದು, ಈ ಹೊಸ ನಿಯಮ ಇನ್ಮುಂದೆ ಪರೀಕ್ಷೆ ಬರೆಯಿವವರಿಗೆ ಅನ್ವಯವಾಗಲಿದೆ. ಈ ಮೊದಲೆಲ್ಲಾ ಪರೀಕ್ಷೆಗೂ ಮುನ್ನ 15 ನಿಮಿಷ ಪ್ತಶ್ನೆ ಪತ್ರಿಕೆ ಓದಿಕೊಳ್ಳುವುದಕ್ಕೇನೆ ಕೊಡಲಾಗಿತ್ತು. ಈಗಲೂ ಆ ನಿಯಮ ಮುಂದುವರೆದಿದೆ. ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳುವುದಕ್ಕೆ, ಬರೆಯುವುದಕ್ಕೆ ಮೂರು ಗಂಟೆಗಳ ಅವಧಿ ನೀಡಲಾಗಿದೆ. ಈ ಹೊಸ ನಿಯಮಗಳು ಮುಂದಿನ ಪರೀಕ್ಷೆಗೆ ಅನ್ವಯವಾಗಲಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!