Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Saturday Motivation : ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ : ಹೇಗಂತೀರಾ ? ಈ ಕಥೆ ಓದಿ…!

Facebook
Twitter
Telegram
WhatsApp

 

ಸುದ್ದಿಒನ್ , Saturday Motivation : ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಜೀವನವನ್ನು ನಿರ್ಧರಿಸುತ್ತವೆ. ನಾವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡರೆ ಒಳ್ಳೆಯದೇ ಆಗುತ್ತದೆ. ನೀವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ, ನೀವು ಕೆಟ್ಟ ಹಾದಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಇದಕ್ಕೊಂದು ಕಥೆಯಿದೆ.

ಒಂದು ಆಶ್ರಮದಲ್ಲಿ ಶಿಷ್ಯರು ವೃತ್ತಾಕಾರವಾಗಿ ಕುಳಿತು ಮಾತನಾಡುತ್ತಿರುತ್ತಾರೆ. ಅವರ ನಡುವೆ ಒಂದು ವಿಚಾರವಾಗಿ ವಾಗ್ವಾದ ನಡೆಯುತ್ತದೆ. ಕಳ್ಳನಿಗೆ ಯಾವಾಗಲೂ ಕೆಟ್ಟದೇ ಆಗುತ್ತದೆ ಎಂದು ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಇಲ್ಲ ಇಲ್ಲ ಅವನಿಗೂ ಒಳ್ಳೆಯದು ಆಗುತ್ತದೆ ಎಂದು ಮತ್ತೆ ಕೆಲವರು ವಾದಿಸುತ್ತಾರೆ. ಅದೇ ಸಮಯದಲ್ಲಿ ಅವರ ಗುರುಗಳು ಅಲ್ಲಿಗೆ ಬರುತ್ತಾರೆ. ಅವರ ಮಾತು ಕೇಳಿ ಏನು ಸಮಸ್ಯೆ ಎಂದು ಕೇಳಿದರು. ತಮ್ಮ ನಡುವೆ ನಡೆಯುತ್ತಿರುವ ವಾಗ್ವಾದದ ಬಗ್ಗೆ ಹೇಳಿದರು.  ಅದರಲ್ಲಿರುವ ಸತ್ಯವನ್ನು ಅವರು ಅರ್ಥಮಾಡಿಕೊಳ್ಳಲು ಗುರುಗಳು ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದರು.

ಸಮರ ಕಲೆಗಳನ್ನು ಕಲಿತ ಓರ್ವ ವ್ಯಕ್ತಿಯು ಕೆಲಸಕ್ಕಾಗಿ ಎಲ್ಲೆಲ್ಲೋ ಅಲೆಯುತ್ತಾನೆ. ಕೊನೆಗೆ ಒಬ್ಬ ರಾಜನ ಬಳಿ ಹೋಗಿ ಸೇವಕನಾಗುತ್ತಾನೆ. ದಿನಗಳು ಕಳೆದಂತೆ ಸೇವಕನು ರಾಜನ ಹೆಂಡತಿಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಅವಳು ಕೂಡ ಅವನನ್ನು ಇಷ್ಟಪಡುತ್ತಾಳೆ. ಅವರಿಬ್ಬರೂ ಅಂತಃಪುರದಿಂದ ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಓಡಿಹೋಗಲು ನಿರ್ಧರಿಸುತ್ತಾರೆ.  ಕೆಲವೇ ದಿನಗಳಲ್ಲಿ ಹಣ ಖಾಲಿಯಾಗುತ್ತದೆ. ಹಣ ಖಾಲಿಯಾದಾಗ, ಸೇವಕನ ವರ್ತನೆಯಿಂದ ರಾಜನ ಹೆಂಡತಿ ಅಸಮಾಧಾನಗೊಳ್ಳುತ್ತಾಳೆ. ನಂತರ ಅವನಿಂದ ದೂರ ಹೋಗುತ್ತಾಳೆ.

ಕೆಲವು ದಿನಗಳ ನಂತರ ಆ ಸೇವಕನು ಭಿಕ್ಷುಕನಾಗುತ್ತಾನೆ. ಅವನು ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ ಕೆಲವು ಒಳ್ಳೆಯ ಕಾರ್ಯಗಳನ್ನು ಮಾಡಲು ನಿರ್ಧರಿಸುತ್ತಾನೆ. ಅವನು ಭಿಕ್ಷೆ ಬೇಡುವ ಸ್ಥಳದ ಸಮೀಪದಲ್ಲಿ ಒಂದು ಬೆಟ್ಟವಿತ್ತು. ಜನರು ಮುಂದಿನ ಊರಿಗೆ ಹೋಗಲು ಆ ಬೆಟ್ಟವನ್ನು ದಾಟಬೇಕಿತ್ತು. ಬೆಟ್ಟದ ಮೇಲೆ ಅಪಾಯಕಾರಿ ರಸ್ತೆ ಇದೆ ಮತ್ತು ಅನೇಕ ಜನರು ಅಲ್ಲಿ ಸಾಯುತ್ತಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಿಳಿದ ಸೇವಕನು ಬೆಟ್ಟದ ಮೂಲಕ ಸುರಂಗವನ್ನು ಮಾಡಲು ನಿರ್ಧರಿಸುತ್ತಾನೆ.

ಅವನು ಹಗಲಿನಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡಿಕೊಳ್ಳುತ್ತಾನೆ. ಮತ್ತು ರಾತ್ರಿ ಸಮಯದಲ್ಲಿ ಸುರಂಗ ಕೊರೆಯುವ ಕೆಲಸ ಮಾಡತೊಡಗಿದ. ಹೀಗೆ ಮೂವತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ, ಅವನು 2,280 ಅಡಿ ಉದ್ದ, 20 ಅಡಿ ಎತ್ತರ ಮತ್ತು 30 ಅಡಿ ಅಗಲದ ಸುರಂಗವನ್ನು  ಅಗೆಯುತ್ತಾನೆ. ಕೆಲವು ದಿನಗಳ ನಂತರ, ಸುರಂಗ ತೋಡುವ ಕೆಲಸ ಕೊನೆಯ ಹಂತಕ್ಕೆ ಬಂದಾಗ, ತನಗೆ ಕೆಲಸ ಮಾಡಿ ಮೋಸ ಮಾಡಿದ ವ್ಯಕ್ತಿ ಸುರಂಗವನ್ನು ತೋಡುತ್ತಿರುವುದನ್ನು ರಾಜನಿಗೆ ತಿಳಿಯುತ್ತದೆ. ಅವನು ಸೇಡು ತೀರಿಸಿಕೊಳ್ಳಲು ಅಲ್ಲಿಗೆ ಬರುತ್ತಾನೆ. ನನಗೆ ಮೋಸ ಮಾಡಿದ್ದಕ್ಕಾಗಿ ನನ್ನ ಕೈಯಿಂದಲೇ ನಿನ್ನನ್ನು ಕೊಲ್ಲುತ್ತೇನೆ ಎಂದು ರಾಜ ಹೇಳುತ್ತಾನೆ. ಆಗ ಸೇವಕ ನೀನು ನನ್ನನ್ನು ಕೊಲ್ಲಬಹುದು, ಆದರೆ ನನಗೆ ಒಂದು ಆಸೆ ಇದೆ. ಈ ಸುರಂಗವನ್ನು ಪೂರ್ಣಗೊಳಿಸಿದ ನಂತರ ನನ್ನನ್ನು ಕೊಲ್ಲುವಂತೆ ಮನವಿ ಮಾಡುತ್ತಾನೆ.

ಇದರೊಂದಿಗೆ ರಾಜ ಹಿಂತಿರುಗುತ್ತಾನೆ. ಆದರೆ ಸೇವಕನು ನಿಜವಾಗಿಯೂ ಸುರಂಗವನ್ನು ಅಗೆಯುತ್ತಿದ್ದಾನೋ ಅಥವಾ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೋ ಎಂದು ಅವನು ತನಿಖೆ ಮಾಡುತ್ತಾನೆ. ನಿಜವಾಗಿ ಸುರಂಗ ತೋಡುತ್ತಿರುವುದನ್ನು ಕಂಡು ಆಶ್ಚರ್ಯ ಪಡುತ್ತಾನೆ. ಇಷ್ಟು ವರ್ಷ ಏಕಾಂಗಿಯಾಗಿ ದುಡಿದ ನೀನು ಯಾವ ಪ್ರತಿಫಲವನ್ನೂ ಪಡೆಯುತ್ತಿಲ್ಲ ಏಕೆ ಎಂದು ರಾಜ ಕೇಳುತ್ತಾನೆ. ಆಗ ಸೇವಕನು ನಿನಗೆ ತಿಳಿದೋ ತಿಳಿಯದೆಯೋ ಮೋಸ ಮಾಡಿದ್ದೇನೆ ಎಂದು ಉತ್ತರಿಸುತ್ತಾನೆ. ಮತ್ತು ಈಗ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸುರಂಗವನ್ನು ತೋಡುತ್ತಿದ್ದೇನೆ ಎಂದನು. ಇದರಿಂದ ರಾಜನಿಗೆ ಆಶ್ಚರ್ಯವಾಗುತ್ತದೆ. ನನ್ನ ಕೆಲಸ ಮುಗಿದಿದೆ ನೀವು ಈಗ ನನ್ನನ್ನು ಕೊಲ್ಲಬಹುದು ಎಂದು ರಾಜನಿಗೆ ಹೇಳುತ್ತಾನೆ. ನೀನು ಮೊದಲಿನವನಾಗಿದ್ದರೆ ನಿನ್ನನ್ನು ಕೊಲ್ಲುತ್ತಿದ್ದೆ. ಈಗ ನೀನು ಸಂಪೂರ್ಣ ಬದಲಾಗಿದ್ದೀಯ. ನೀನು ತೆಗೆದುಕೊಂಡ ನಿರ್ಧಾರ. ನಿನ್ನನ್ನು ಬದುಕಿಸಿದೆ ಎಂದು ರಾಜನು ಹೇಳುತ್ತಾನೆ.

ಅವನು ಕಳ್ಳನಾಗಿದ್ದರೂ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂದು ಗುರುಗಳು ಶಿಷ್ಯರಿಗೆ ಹೇಳುತ್ತಾರೆ. ಹಾಗಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಜೀವನವನ್ನು ನಿರ್ಧರಿಸುತ್ತವೆ. ನಮ್ಮ ನಿರ್ಧಾರಗಳೇ ನಮ್ಮ ಜೀವನ. ಹಾಗಾಗಿ ನಾವು ಒಳ್ಳೆಯವರಾಗಿರಬೇಕು, ಒಳ್ಳೆಯದನ್ನೇ ಮಾಡಬೇಕು ಪ್ರತಿಯಾಗಿ ನಮಗೂ ಒಳ್ಳೆಯದೇ ಆಗುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪವಿತ್ರಾ ಜಯರಾಂ ನಿಧನ : ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆಯಿಂದ ಸಾವು..!

ಕಿರುತೆರೆ ನಟಿ ಪವಿತ್ರಾ ಜಯರಾಂ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಕಾರು ಅಪಘಾತದಿಂದ ಸಾವನ್ನಪ್ಪಿದ್ದರು. ಅದಕ್ಕೂ ಮುನ್ನ ನಟ ದರ್ಶನ್ ಅವರ ಸಿನಿಮಾಕ್ಕೂ ಒಕೆ ಎಂದಿದ್ದರು. ಆದರೆ ವಿಧಿ ಬೇರೆಯದ್ದೇ ಆಟ ಆಡಿದೆ. ಹೈದ್ರಾಬಾದ್ ತಲುಪುವ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

error: Content is protected !!