Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪಿತಪ್ಪಿಯೂ ಬರಬೇಡಿ : ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆ ಡಾ.ಎಸ್ ಎಚ್ ಶಫಿಉಲ್ಲ(ಕುಟೀಶ) ಅವರ ಕವಿತೆ

Facebook
Twitter
Telegram
WhatsApp

ಅಪ್ಪಿತಪ್ಪಿಯೂ ಬರಬೇಡಿ

ಇಂದು ನಿಮ್ಮ ಜನ್ಮದಿನ ಬಾಬಾಸಾಹೇಬರೇ,
ಸಂತೋಷದಿಂದ ಸಂಭ್ರಮಿಸಲೇ!?
ದಿಕ್ಕುಕಾಣದೆ ದುಃಖಿಸಿಬಿಡಲೇ!?
ಸಮಾನತೆಯ ಸಾಕಾರದ ಸನ್ಮಿತ್ರ
ನೀವು ನೋಡುತ್ತಿರುವಿರಾ ಸ್ವರ್ಗದಿಂದಲೇ?
ಹುಲುಸಾಗಿ ಬೆಳೆಯುತ್ತಿದೆ ನೋಡು ಶತ್ರುತ್ವ

ಪುಂಡಪೋಕರಿಗಳದ್ದೇ ದರ್ಬಾರು
ಅವಿವೇಕಿ ಆಡಳಿತಗಾರದ್ದೇ ಕಾರುಬಾರು
ತಿನ್ನುವ ಆಹಾರವನ್ನು ಪ್ರಶ್ನಿಸುವನೊಬ್ಬ
ಹಾಕುವ ಬಟ್ಟೆಯನ್ನು ತೆಗೆಸುವ ಮತ್ತೊಬ್ಬ

ಹಿಂದುವಂತೆ,ಮುಸ್ಲಿಮನಂತೆ
ಹಿಜಬ್ ಅಂತೆ,ಕೇಸರಿ ವಸ್ತ್ರವಂತೆ
ಮಸೀದಿಯಂತೆ, ಮಂದಿರವಂತೆ
ಹಲಾಲ್ ಅಂತೆ, ಜಟ್ಕಾಅಂತೆ

ಅಲ್ಲಿ ಖರೀದಿಸಬೇಕಂತೆ;ಇಲ್ಲಿ ಬೇಡವಂತೆ
ಅವನ್ಯಾರೋ ಸ್ವಾಮೀಜಿಯಂತೆ
ಬಾಯಿಗೆ ಬಂದಂತೆ ಬೊಗಳುವನಂತೆ
ಇವನ್ಯಾರೋ ವಾಗ್ಮಿಯಂತೆ
ಸುಳ್ಳಿನಲ್ಲೆ ಜನರ ಮಳ್ಳು ಮಾಡುವನಂತೆ
ಇವರದೂ ಮನುಷ್ಯಜನ್ಮವಂತೆ!!!!

ನೋಡಿಬಿಡು ಮಾರಾಯ
ನಮ್ಮ ದೇಶದಲ್ಲಿರುವ ಘನಂದಾರಿಗಳ
ಜಾತಿಧರ್ಮವೆಂಬ ಕಿಚ್ಚು ಹಚ್ಚಿ
ರಾಷ್ಟೋದ್ಧಾರ ಮಾಡಲು ಹೊರಟಿರುವವರ

ಈಗ ನೀವು ನೋಡುವುದೇನು ಬಿಡಿ
ಇಂಥವರನ್ನೆ ಅಧ್ಯಯನ ಮಾಡಿಬಿಟ್ಟಿದ್ದೀರಿ
ಇವರ ಮಧ್ಯೆ ಸಾಕಷ್ಟು ಅನುಭವಿಸಿದ್ದೀರಿ
ಹಾಗಾಗಿ ಅಲ್ಲವೇ ನೀವು ಹೋರಾಡಿದ್ದು
ಧರ್ಮನಿರಪೇಕ್ಷ ಸಂವಿಧಾನ ರಚಿಸಿದ್ದು
ಈಗ ಅದರ ಬುಡವನ್ನೇ ಅಲ್ಲಾಡಿಸಿದ್ದಾರೆ.

ಈ ವಿಷಘಳಿಗೆಯಲ್ಲೇ ನೀವು ಇಲ್ಲ!
ಮತ್ತೆ ಹುಟ್ಟಿಬನ್ನಿ ಎಂದು ಹೇಳುವುದಿಲ್ಲ
ಅಪ್ಪಿತಪ್ಪಿಯೂ ಬರಬೇಡಿ
ಸ್ವರ್ಗದಲ್ಲಿಯೇ ಸನ್ಮಾನಿತರಾಗಿದ್ದುಬಿಡಿ
ಬಂದರೆ ನಿಮಗೂ ತಪ್ಪಿದ್ದಲ್ಲ
ದೇಶದ್ರೋಹದ ಪಟ್ಟ !
ದೇಶದ್ರೋಹದ ಪಟ್ಟ !!

ಕವಿ : ಡಾ.ಎಸ್ ಎಚ್ ಶಫಿಉಲ್ಲ(ಕುಟೀಶ) ಮೊ: 88674 35662

ಸರ್ವರಿಗೂ ಅಂಬೇಡ್ಕರ್ ಜಯಂತಿಯ ಶುಭಕಾಮನೆಗಳು

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!