Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲರ ಸ್ಟೇಟಸ್ ನಲ್ಲೂ ಭಾವುಕರಾಗಿದ್ದ ಅಜ್ಜಿ ಇವರೇ ನೋಡಿ..!

Facebook
Twitter
Telegram
WhatsApp

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದಾಗಿನಿಂದಲೂ ಆ ಸತ್ಯವನ್ನ ಇನ್ನು ಯಾರಿಗೂ ಒಪ್ಪಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಅವರ ನಗುವಿನ ಫೋಟೋ, ಅವರೇ ಹಾಡಿರುವ ಹಾಡು, ಅವರ ಅಪರೂಪದ ವಿಡಿಯೋಗಳನ್ನ ಎಲ್ಲರು ಸ್ಟೇಟಸ್ ಗಲ್ಲೂ ಕಾಣ ಸಿಗುತ್ತವೆ. ಅವೇ ಹೇಳುತ್ತಿವೆ ಅಪ್ಪು ಅಜರಾಮರ ಅನ್ನೋದನ್ನ.

ಆದ್ರೆ ಬೆಳಗ್ಗೆಯಿಂದಲೂ ಒಂದು ವಿಡಿಯೋ ಎಲ್ಲರ ಸ್ಟೇಟಸ್ ನಲ್ಲೂ ಹರಿದಾಡುತ್ತಿದೆ. ಭಾವುಕರನ್ನಾಗಿಸುತ್ತಿದೆ. ಎಲ್ಲರಿಗೂ ಗೊತ್ತಿರೋ ವಿಚಾರ ಅಂದ್ರೆ ಅಪ್ಪು ಎಲ್ಲಾ ವರ್ಗದ ಜನರನ್ನು ರೀಚ್ ಆದಂತ ಸ್ಟಾರ್. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅಪ್ಪು ಅಚ್ಚುಮೆಚ್ಚು. ಅದರಂತೆ ಅಜ್ಜಿಯೊಬ್ಬರು ಕೆಎಸ್ಆರ್ಟಿಸಿ ಬಸ್ ಮೇಲಿದ್ದ ಅಪ್ಪು ಫೋಟೋವನ್ನ ತನ್ನ ಸೆರಗಿನಿಂದ ಹೊರೆಸುತ್ತಿದ್ದರು. ಆ ವಿಡಿಯೋ ಎಲ್ಲರ ಮನಸ್ಸನ್ನ ಮೂಕ ವಿಸ್ಮಿತವನ್ನಾಗಿಸಿತ್ತು.

ಆ ಅಜ್ಜಿ ಅಪ್ಪು ಫೋಟೋ ನೋಡಿ ಕಣ್ಣೀರು ಹಾಕಿದ್ರು. ಅಪ್ಪು ಫೋಟೋ ಮೇಲಿನ ಧೂಳು ಹೊರೆಸಿ ಮುತ್ತಿಟ್ಟಿದ್ದರು. ಈ ದೃಶ್ಯ ಕಂಡು ಎಲ್ಲರ ಮನಸ್ಸು ಕರಗಿತ್ತು. ಆ ಘಟನೆ ನಡೆದದ್ದು ಕೊಪ್ಪಳ ತಾಲೂಕಿನ ಕುಕನೂರು ತಾಲೂಕಿನ ಬಸ್ ನಿಲ್ದಾಣದಲ್ಲಿ. ಕುಕನೂರಿನಿಂದ ಅರಿಕೇರಾಗೆ ಹೊರಡುತ್ತಿದ್ದ ಬಸ್ ಮೇಲೆಯೇ ಅಪ್ಪು ಫೋಟೋ ಇದ್ದದ್ದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ರೈತರಲ್ಲಿ ಸಂತಸ ತಂದ ಮಳೆ : ಉಳುಮೆಗೆ ಸಿದ್ಧತೆ

  ಚಿತ್ರದುರ್ಗ: ಕಳೆದ ಬಾರಿ ಮಳೆಯಿಲ್ಲದೆ, ಸರಿಯಾದ ಬಿತ್ತನೆ ಮಾಡಲಾಗದೆ ಹೈರಾಣಾಗಿದ್ದ ರೈತರ ಮೊಗದಲ್ಲಿ ಈಗ ಸಂತಸ ತುಂಬಿ ತುಳುಕುತ್ತಿದೆ. ಜಿಲ್ಲೆಯಲ್ಲೂ ಮಳೆಯ ದರ್ಶನ ಭಾಗ್ಯವಾಗಿದೆ. ಹೀಗಾಗಿ ರೈತರು ಉಳುಮೆ ಮಾಡಲು ಎಲ್ಲಾ ತಯಾರಿ

ಸನಾತನ ಧರ್ಮದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದ ಜಗದ್ಗುರು ಶಂಕರಾಚಾರ್ಯರರು : ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿಕೆ

  ಚಿತ್ರದುರ್ಗ.12: ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

error: Content is protected !!