ಎಲ್ಲರ ಸ್ಟೇಟಸ್ ನಲ್ಲೂ ಭಾವುಕರಾಗಿದ್ದ ಅಜ್ಜಿ ಇವರೇ ನೋಡಿ..!

suddionenews
1 Min Read

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದಾಗಿನಿಂದಲೂ ಆ ಸತ್ಯವನ್ನ ಇನ್ನು ಯಾರಿಗೂ ಒಪ್ಪಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಅವರ ನಗುವಿನ ಫೋಟೋ, ಅವರೇ ಹಾಡಿರುವ ಹಾಡು, ಅವರ ಅಪರೂಪದ ವಿಡಿಯೋಗಳನ್ನ ಎಲ್ಲರು ಸ್ಟೇಟಸ್ ಗಲ್ಲೂ ಕಾಣ ಸಿಗುತ್ತವೆ. ಅವೇ ಹೇಳುತ್ತಿವೆ ಅಪ್ಪು ಅಜರಾಮರ ಅನ್ನೋದನ್ನ.

ಆದ್ರೆ ಬೆಳಗ್ಗೆಯಿಂದಲೂ ಒಂದು ವಿಡಿಯೋ ಎಲ್ಲರ ಸ್ಟೇಟಸ್ ನಲ್ಲೂ ಹರಿದಾಡುತ್ತಿದೆ. ಭಾವುಕರನ್ನಾಗಿಸುತ್ತಿದೆ. ಎಲ್ಲರಿಗೂ ಗೊತ್ತಿರೋ ವಿಚಾರ ಅಂದ್ರೆ ಅಪ್ಪು ಎಲ್ಲಾ ವರ್ಗದ ಜನರನ್ನು ರೀಚ್ ಆದಂತ ಸ್ಟಾರ್. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅಪ್ಪು ಅಚ್ಚುಮೆಚ್ಚು. ಅದರಂತೆ ಅಜ್ಜಿಯೊಬ್ಬರು ಕೆಎಸ್ಆರ್ಟಿಸಿ ಬಸ್ ಮೇಲಿದ್ದ ಅಪ್ಪು ಫೋಟೋವನ್ನ ತನ್ನ ಸೆರಗಿನಿಂದ ಹೊರೆಸುತ್ತಿದ್ದರು. ಆ ವಿಡಿಯೋ ಎಲ್ಲರ ಮನಸ್ಸನ್ನ ಮೂಕ ವಿಸ್ಮಿತವನ್ನಾಗಿಸಿತ್ತು.

ಆ ಅಜ್ಜಿ ಅಪ್ಪು ಫೋಟೋ ನೋಡಿ ಕಣ್ಣೀರು ಹಾಕಿದ್ರು. ಅಪ್ಪು ಫೋಟೋ ಮೇಲಿನ ಧೂಳು ಹೊರೆಸಿ ಮುತ್ತಿಟ್ಟಿದ್ದರು. ಈ ದೃಶ್ಯ ಕಂಡು ಎಲ್ಲರ ಮನಸ್ಸು ಕರಗಿತ್ತು. ಆ ಘಟನೆ ನಡೆದದ್ದು ಕೊಪ್ಪಳ ತಾಲೂಕಿನ ಕುಕನೂರು ತಾಲೂಕಿನ ಬಸ್ ನಿಲ್ದಾಣದಲ್ಲಿ. ಕುಕನೂರಿನಿಂದ ಅರಿಕೇರಾಗೆ ಹೊರಡುತ್ತಿದ್ದ ಬಸ್ ಮೇಲೆಯೇ ಅಪ್ಪು ಫೋಟೋ ಇದ್ದದ್ದು.

Share This Article
Leave a Comment

Leave a Reply

Your email address will not be published. Required fields are marked *