Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೂಡಾ ಹಗರಣ : ಮೃತ ಚಂದ್ರಶೇಖರ್ ಪತ್ನಿಗೆ ಈಶ್ವರಪ್ಪ ಹಣ ಸಹಾಯ..!

Facebook
Twitter
Telegram
WhatsApp

ಶಿವಮೊಗ್ಗ: ಮೂಡಾ ಹಗರಣ ರಾಜ್ಯದಲ್ಲಿಯೇ ಬಹಳ ದೊಡ್ಡ ಹಗರಣವಾಗಿ ಸದ್ದು ಮಾಡಿತ್ತು. ಕೋಟ್ಯಾಂತರ ರೂಪಾಯಿ ಅಭಿವೃದ್ಧಿಯ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಇದರ ತನಿಖೆ ನಡೆದು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಾಗಿದೆ. ಆದರೆ ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಚಂದ್ರಶೇಖರ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಪತ್ನಿಯನ್ನು ಭೇಟಿಯಾದ ಕೆ ಎಸ್ ಈಶ್ವರಪ್ಪ ಅವರು ಹಣದ ಸಹಾಯ ಮಾಡಿದ್ದಾರೆ.

ಮೃತ ಚಂದ್ರಶೇಖರ್ ಪತ್ನಿಗೆ ಐದು ಲಕ್ಷ ಹಣ ನೀಡಿದ್ದಾರೆ. ಈ ವೇಳೆ ಚಂದ್ರಶೇಖರ್ ಹೆಂಡತಿ ಕಣ್ಣೀರು ಹಾಕಿದರು. ಆಗ ಈಶ್ವರಪ್ಪ ಅವರೇ ಸಮಾಧಾನ ಮಾಡಿದ್ದು, ನೀವೂ ಸ್ವಾಭಿಮಾನಿಗಳು ಎಂಬುದು ನನಗೆ ಗೊತ್ತು. ನಿಮಗೆ ಅಲ್ಪಸ್ವಲ್ಪ ಆದ್ರೂ ಸಹಾಯವಾಗಲಿ ಅಂತಷ್ಟೇ ಈ ಹಣ ನೀಡುತ್ತಿರುವುದು. ತೆಗೆದುಕೊಳ್ಳಿ. ನಮ್ಮನ್ನ ಅಣ್ಣತಮ್ಮಂದಿರು ಅಂತ ತಿಳಿದುಕೊಳ್ಳಿ ಎಂದು ಹಣ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಈಶ್ವರಪ್ಪ ಅವರು, ಅವರ ಕುಟುಂಬಕ್ಕೆ ಒಳ್ಳೆಯದಾಗಲಿ, ಚಂದ್ರಶೇಖರ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಅಂತ ಹೇಳಿ ಎಲ್ಲರ ಪರವಾಗಿ ಈ ಹಣವನ್ನು ನೀಡಿದ್ದೇವೆ. ಸರ್ಕಾರ ಏನು ಘೋಷಣೆ ಮಾಡಿದೆ ಆ ಹಣವನ್ನು ಸರ್ಕಾರ ನೀಡಬೇಕು. ನಮ್ಮ ಪರವಾಗಿ ಈ ಹಣವನ್ನು ನೀಡುತ್ತಿದ್ದೇವೆ. ಸಮಾಜದ ಋಣವನ್ನು ನಾವೂ ತೀರಿಸುತ್ತಿದ್ದೇವೆ. ಅವತ್ತು ಹೇಳಿದ್ರಿ ನೀವೂ ಕೊಡದೆ ಇದ್ದರೂ ನಾವೂ ಹೇಗೋ ಜೀವನ ಮಾಡಿಕೊಳ್ಳುತ್ತೇವೆ ಅಂತ.

ಸರ್ಕಾರದ ಋಣವನ್ನು ಅವರು ಆದಷ್ಟು ಬೇಗ‌ ತೀರಿಸಬೇಕು. ತೀರಿಸದೆ ಇದ್ದಲ್ಲಿ ಹೇಗೆ ಎಚ್ಚರಿಕೆ ಕೊಡಬೇಕೋ ಆ ರೀತಿ ಕೊಡುತ್ತೇವೆ. ನಿಮಗೆ ಒಳ್ಳೆಯದಾಗಲಿ ಎಂದೇ ಬಯಸುತ್ತೇವೆ ಎಂದು ಚಂದ್ರಶೇಖರ್ ಪತ್ನಿಗೆ ಹಣ ಕೊಟ್ಟು, ಹಾರೈಸಿದ್ದಾರೆ. ಈ ವೇಳೆ ಈಶ್ವರಪ್ಪ ಪರವಾಗಿ ಘೋಷಣೆಗಳು ಕೇಳಿ ಬಂದಿವೆ ಜೈ ಈಶ್ವರಪ್ಪ ಎಂದು ಘೋಷಣೆ ಕೂಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಗ್ ಬಾಸ್, ಪ್ರಪಂಚವೇನು ಅಂಗಡಿಯಲ್ಲಿ ಸಿಗುವ ಚಡ್ಡಿಯಾ..? ಜಗದೀಶ್ ಗೆ ಧನರಾಜ್ ಟಾಂಗ್..!

ಬಿಗ್ ಬಾಸ್ ಸೀಸನ್ 11 ಶುರುವಾಗಿ ವಾರವಾಗಿದೆ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಮೊದಲ ವಾರವೇ ಒಬ್ಬರು ಮನೆಯಿಂದ ಹೊರಗೆ ಬರಲಿದ್ದಾರೆ. ಟಾಸ್ಕ್ ನಲ್ಲಿ ಸರಿಯಾಗಿ ಆಡದಿರುವವರೋ, ಜನಗಳಿಂದ ಮತಗಳನ್ನು ಪಡೆಯದೆ ಇರುವವರೋ ಹೊರಗೆ ಬರಲಿದ್ದಾರೆ.

ಬಾದಾಮಿ ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ..?

ಸುದ್ದಿಒನ್ : ಆರೋಗ್ಯವನ್ನು ಕಾಪಾಡಿಕೊಳ್ಳಲು ಡ್ರೈ ಫ್ರೂಟ್ಸ್ ತಿನ್ನಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ. ಬಾದಾಮಿ ಅಂತಹ ಒಂದು ಸೂಪರ್ ಫುಡ್. ನಿಯಮಿತವಾದ ಬಾದಾಮಿ ಸೇವನೆಯು ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸರಿಯಾದ

ಈ ರಾಶಿಯವರಿಗೆ ಇಷ್ಟಪಟ್ಟವರ ಜೊತೆ ಮದುವೆ ಫಿಕ್ಸ್ ಆಯಿತು

ಈ ರಾಶಿಯವರಿಗೆ ಇಷ್ಟಪಟ್ಟವರ ಜೊತೆ ಮದುವೆ ಫಿಕ್ಸ್ ಆಯಿತು, ಈ ರಾಶಿಯವರಿಗೆ ವಿದೇಶಿ ಯೋಗ, ಈ ರಾಶಿಗಳಿಗೆ ಸಂತಾನ ಭಾಗ್ಯ, ಭಾನುವಾರರಾಶಿ ಭವಿಷ್ಯ -ಅಕ್ಟೋಬರ್-6,2024 ಸೂರ್ಯೋದಯ: 06:11, ಸೂರ್ಯಾಸ್ತ : 05:57 ಶಾಲಿವಾಹನ ಶಕೆ

error: Content is protected !!