Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೊಬೈಲ್ ಕಂಪನಿಗಳು ರಸ್ತೆ ಅಗೆದಾಗ ಸುಮ್ಮನಿದ್ದರು : ಗ್ಯಾಸ್ ಪೈಪ್ಲೈನ್ ಗೆ ವಿರೋಧ ವ್ಯಕ್ತಪಡಿಸಿದ ಶಾಸಕರಿಗೆ ಪ್ರತಾಪ್ ಸಿಂಹ ಟಾಂಗ್..!

Facebook
Twitter
Telegram
WhatsApp

 

ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಈ ಗ್ಯಾಸ್ ಕನೆಕ್ಷನ್ ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ ಕಡಿಮೆ ರೇಟ್ ಇದ್ದಾಗ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಗ್ಯಾಸ್ ಕನೆಕ್ಷನ್ ಏನೋ ಕೊಡಿಸಿಕೊಂಡ್ರು. ಆದ್ರೆ ಈಗ ಸಾವಿರ ರೂಪಾಯಿ ಎಲ್ಲಾ ಸೇರಿ. ಹೀಗಾಗಿ ಈ ಗ್ಯಾಸ್ ಸಹವಾಸವೇ ಬೇಡ ಎಂದು ಗ್ರಾಮೀಣ ಜನತೆ ಮತ್ತೆ ಸೌದೆ ಒಲೆ ಕಡೆಗೆ ವಾಲುತ್ತಿದ್ದಾರೆ.

ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಗ್ಯಾಸ್ ಪೈಪ್ ಲೈನ್ ಹಾಕೋದ್ರಿಂದ 500. ರೂಪಾಯಿಗೆ ಸಿಗಲಿದೆ. 400 ರೂಪಾಯಿ ಉಳಿತಾಯವಾಗುತ್ತೆ ಎಂದಿದ್ದಾರೆ. ಗ್ಯಾಸ್ ಪೈಪ್ಲೈನ್ ವ್ಯವಸ್ಥೆ ಅತ್ಯಂತ ಮಹತ್ವದ್ದು. ಈಗ 904 ರೂಪಾಯಿ ಗ್ಯಾಸ್ ರೇಟ್ ಇದೆ. ಡೆಲಿವರಿ ಚಾರ್ಜ್ ಸೇರಿ ಸಾವಿರ ಆಗುತ್ತೆ. ಈ ಪೈಪ್ಲೈನ್ ಮಾಡೋದ್ರಿಂದ ಕಡಿಮೆ ಹಣಕ್ಕೆ ಸಿಗುತ್ತೆ.

ಈಗಾಗ್ಲೇ ಈ ಯೋಜನೆ ಗುಜರಾತ್ ನಲ್ಲಿದೆ. ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ಹಲವೆಡೆ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಯೋಜನೆ ನಡೆಯುತ್ತಾ ಇದೆ. ಗ್ಯಾಸ್ ಪೈಪ್ಲೈನ್ ಯೋಜನೆಯನ್ನ ಹಲವರು ವಿರೋಧಿಸುತ್ತಿದ್ದಾರೆ. ಅಲ್ಲ ಅವರೆಲ್ಲಾ ಮೊಬೈಲ್ ಕಂಪನಿಗಳು ಅಗೆದ ಪೈಪ್ಲೈನ್ ಬಗ್ಗೆ ವಿರೋಧಿಸಿದರಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಗ್ಯಾಸ್ ಗಾಗಿ ತೆಗೆದ ಪೈಪ್ಲೈನ್ ಅನ್ನ 24 ಗಂಟೆಗಳ ಒಳಗೆ ಮುಚ್ಚಲಾಗುತ್ತದೆ. ಆ ಹಳ್ಳಗಳನ್ನ ಸರಿ ಮಾಡಲು ಪಾಲಿಕೆಯಿಂದಲೇ ಹಣ ನೀಡಲಾಗುತ್ತೆ. ಖಾಸಗಿ ಕಂಪನಿಗಳು ಹಳ್ಳ ಹಗೆದರೆ ಯಾರು ಕೇಳಲಿಲ್ಲ. ಆದ್ರೆ ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಲು ಹೊರಟರೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!