Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಮಾರಸ್ವಾಮಿಗೆ ತಲೆ ಕೆಟ್ಟಿದ್ಯಾ ಎನ್ನಬಹುದು : ಹೆಚ್ಡಿಕೆ ಹೀಗಂದಿದ್ಯಾಕೆ..?

Facebook
Twitter
Telegram
WhatsApp

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಬರುವವರ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದ್ದು, ಸಣ್ಣ ಪುಟ್ಟ ದೋಷಗಳಿಂದ ಪಕ್ಷದಿಂದ ನಿರ್ಗಮಿಸಲು ಬಯಸಿದ್ದರೋ, ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಮಾಡದೆ ಇರುವಂತವರು, ಪಕ್ಷಕ್ಕೆ ನಿಷ್ಠೆಯಿಂದ ಇರುವವರನ್ನು ಒಳಗೊಂಡಂತೆ, ಹೊಸ ಮುಖಗಳಿಗೂ ಹೆಚ್ಚಿನ ಆದ್ಯತೆ ಕೊಡಬೇಕೆಂಬುದು ನನ್ನ ಉದ್ದೇಶ ಏನಿದೆ, ನನ್ನ ಗುರಿ ಇರುವುದು ಯಾವ ಪಕ್ಷದ ಹಂಗಿಲ್ಲದೆ, ಜನತೆಯ ಸಂಪೂರ್ಣ ಆಶಯದೊಂದಿಗೆ ಬರ ಮಾಡಿಕೊಳ್ಳುತ್ತೇವೆ.

ಬಹಳ ಜನಕ್ಕೆ ಕುಮಾರಸ್ವಾಮಿ ಅವರಿಗೆ ತಲೆ ಕೆಟ್ಟಿದೆಯಾ ಅಂತ ಸಾಕಷ್ಟು ಜನ ಎನ್ನಬಹುದು. ಈಗ ಮೂರ್ನಾಲ್ಕು ತಿಂಗಳ ಹಿಂದೆ ಜೆಡಿಎಸ್ ಮುಗಿದೇ ಹೋಯ್ತು ಅಂತಿದ್ದರು. ಹತ್ತು ಸೀಟು ಬರಲ್ಲ ಅಂತಿದ್ದರು. ರಾಜ್ಯದಲ್ಲಿ ಏನೋ ಡೆವಲಪ್ಮೆಂಟ್ ಶುರುವಾಗಿದೆ. ಇವತ್ತು ನನ್ನ ನಿಲುವಿನ ಬಗ್ಗೆ ನಾಡಿನ ಎಲ್ಲಾ ಸಮಾಜಗಳು ಇವತ್ತು ಮೆಚ್ಚಿಕೊಂಡಿದ್ದಾರೆ ಎಂದಿದ್ದಾರೆ.

ಐದು ವರ್ಷ ಕೊಟ್ಟರೆ ನಿರಾವರಿ ಯೋಜನೆ ಪೂರ್ಣಗೊಳಿಸುವ ಬಗ್ಗೆ ಆಶ್ವಾಸನೆ ನೀಡಿದ ಬಗ್ಗೆ ಮಾತನಾಡಿ, ಸರ್ಕಾರ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ. ಉದಾಹರಣೆಗೆ 25 ಸಾವಿರ ಕೋಟಿಯನ್ನ 16 ತಿಂಗಳಿಗೆ ಹೊಂದಿಸಿದ್ದೆ. ಅದೇ ನಿಮಗೆ ಉದಾಹರಣೆ. ಇವತ್ತು ನಮಗೂ ಗೊತ್ತಿದೆ. ಮಹದಾಯಿ ಇರಲಿ, ಮೇಕದಾಟಿರಲಿ ಸಣ್ಣ ಪುಟ್ಟ ಕಾಲುವೆಗಳ ಆಧುನೀಕರಣ ಮಾಡಯವುದಿರಲಿ ಎಲ್ಲವನ್ನು ಪಟ್ಟಿ ಮಾಡುತ್ತಾ ಹೋದರೆ, ಇವತ್ತು ಹಲವಾರು ನದಿಯ ಮೂಲವನ್ನು ಬಳಕೆ ಮಾಡಿಕೊಂಡು ಹೋಗಬಹುದು.

ಕನಿಷ್ಠ ನಾಲ್ಕರಿಂದ ಐದು ಲಕ್ಷ ಕೋಟಿ ಹಣ ಬೇಕು. ಅದಕ್ಕೋಸ್ಕರವೇ ಜನತೆಗೆ ಮನವಿ ಮಾಡುತ್ತಿರುವುದು. ಐದು ವರ್ಷದ ಸರ್ಕಾರವನ್ನು ಜೆಡಿಎಸ್ ಪಕ್ಷಕ್ಕೆ ನೀಡಿ. ಐದು ವರ್ಷದಲ್ಲಿ ನಾನು ಹೇಳಿದ ಯೋಜನೆಗಳನ್ನು ಸಂಪೂರ್ಣಗೊಳಿಸದೆ ಇದ್ದರೆ, ಸ್ವತಂತ್ರವಾದಂತ ಅಧಿಕಾರವನ್ನು ಕೊಟ್ಟರೆ, ಜನತೆ ಕೈನಲ್ಲೇ ಇರುವುದು ಇದು. ನಂಗೊಂದು ಸವಾಲಿದು. ನಾಡಿನ ಬದುಕು, ಮಕ್ಕಳ ಭವಿಷ್ಯ ಮುಂದಿನ ಪೀಳಿಗೆಯದ್ದು. ಒಂದು ಅವಕಾಶವನ್ನು ಕೊಡಿ. ಪೂರೈಸದೆ ಹೋದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

error: Content is protected !!